Pages

ಪುಸ್ತಕಪ್ರೀತಿ - ಬಸವಣ್ಣನವರ ಸಾಮಾಜಿಕ ಧಾರ್ಮಿಕ ಚಳುವಳಿ ಹೀಗೆ ಸಾಗಬಹುದಿತ್ತು


ಚಂದ್ರಶೇಖರ ವಸ್ತ್ರದ ಅವರು ಬರೆದ ‘ಮಾನವತಾವಾದಿ ಬಸವಣ್ಣನವರು’ ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಬಸವಣ್ಣನವರ ಬದುಕು, ಹೋರಾಟ, ತತ್ವ ಸಿದ್ದಾಂತಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟದ್ದಾರೆ. ಬಸವಣ್ಣನವರ ಬಗ್ಗೆ ಮೇಲುಸ್ತರದಲ್ಲಿ ಕೇಳೀದ್ದೆ, ಓದಿದ್ದೆ, ನಾಡಕ ಸಿನೆಮಾಗಳನ್ನು ನೋಡಿದ್ದೆ. ಅವರಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿಸಲ್ಪಟ್ಟಿದ್ದೇನೆ ಕೂಡ. ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳುವುದು ಕಷ್ಟ ಸಾದ್ಯವಾದರೂ ನಿರಂತರ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಅನುಸರಿಸಬಹುದು. ಬಸವಣ್ಣನವರ ವಿಚಾರಧಾರೆ, ನಿಲುವು ಧೋರಣೆಗಳ ಕುರಿತು ಮಾತನಾಡಲು ಚೆನ್ನ, ಉಪದೇಶೀಸಲು ಅಪ್ಯಾಯಮಾನವಾಗುತ್ತದೆ. ಆದರೆ  ನಮ್ಮ ವೈಯಕ್ತಿಕ ಜೀವನದಲ್ಲಿ ಆಚರಣೆಗೆ ತರಲು ಹೊರಟರೆ ಹುಚ್ಚುತನವೆನಿಸುತ್ತದೆ. ಉದಾಹರಣೆಗೆ, ನಮ್ಮ ಮನೆಯಲ್ಲಿ ಕಳ್ಳತನವಾಗಿ ಕಳ್ಳ ಸಿಕ್ಕಿಬಿದ್ದರೆ ಅವನು ಕದಿದ್ದನ್ನು ಅವನಿಗ ಎಕೊಟ್ಟುಕಳುಹಿಸಲು ಸಾದ್ಯವೆ ? ಸಂಪತ್ತಿನ ಅಸಂಗ್ರಹ, ಬಡವರು, ದೀನದಲಿತರನ್ನು ಸಂಪೂರ್ಣವಾಗಿ ಸಮಾನರೆಂದು ಒಪ್ಪಿಕೊಳ್ಳುವ ಮನಸ್ಸು, ದೇವರಲ್ಲಿ ಅಪರಿಮಿತವಾದ ಭಕ್ತಿ, ಜಾತಿ ಬೇಧವನ್ನು ಬಿಡುವುದು ಮುಂತಾದವು ಅನುಕರಣೆಗೆ ಯೋಗ್ಯವಾದರೂ ಆಚರಿಸುವುದು ಕಷ್ಟಸಾದ್ಯ.
ಪುಸ್ತಕದಲ್ಲಿ ಅವರ ಕೊನೆಯ ದಿನಗಳ ಚಿತ್ರಣವನ್ನು ಓದಿದ ನಂತರ, ಎಲ್ಲಾ ಕಾರ್ಯಗಳನ್ನು ಹೋರಾಟದಿಂದ , ಸಂಪೂರ್ಣ ವೈಯಕ್ತಕ ಬದ್ದತೆ ಮತ್ತು ಜನ ಬೆಂಬಲದಿಂದ ಯಶಸ್ವಯಾಗಿ ನಡೆಸಿಕೊಂಡು ಹೋದವರು ಕೊನೆ ಹಂತದಲ್ಲಿ ಯಾಕೆ ಸೋತವರಂತೆ ಪರಿಸ್ಥಿಯನ್ನು ಎದುರಿಸಿ ಸುಧಾರಿಸದೆ ಪಲಾಯನಗೈದರು ಎಂಬ ಪ್ರಶ್ನೆ ನನ್ನಲ್ಲಿ ಎದ್ದಿತು. ಏನಾಯಿತೊ ಅದನ್ನು ತಡೆಯಲು ಸಾದ್ಯವಾಗುತಿರಲಿಲ್ಲವೆ ? ಮುಂದಾಲೋಚನೆ, ಮುಂಜಾಗ್ರತೆವಹಿಸಿ ಇಡೀ ಕ್ರಾಂತಿಯೆ ಕುಸಿಯುವುದನ್ನು ತಪ್ಪಿಸಲಾಗುತ್ತಿರಲಿಲ್ಲವೆ ? ಬೇರೆ ಏನು ಮಾಡಬಹುದಿತ್ತು ಅನ್ನುವುದನ್ನು ಚರ್ಚಿಸುವುದು ಈ ಲೇಖನದ ಮುಖ್ಯ ಉದ್ದೇಶ. ಬಹುಶ: ಈಗಿನ ಆಲೋಚನಾಕ್ರಮ, ಪರಿಸ್ಥಿತಿ ಮತ್ತು ದೃಷ್ಟಿಕೋನವನ್ನಿಟ್ಟುಕೊಂಡು 800 ವರ್ಷ ಹಿಂದಿನ ಪರಿಸ್ಥಿತಿಯನ್ನು ವಿಶ್ಲೇಶೀಸುವುದು ಸರಿಯಲ್ಲವೇನೋ.  ಆದರೂ ಆಗಿನ ಕಾಲದ ಅನೇಕ ವಿಚಾರ ಘಡನೆಗಳು ಈಗಲೂ ನಡೆಯುತ್ತಿರುವುದರಿಂದ ವ್ಯವಸ್ಥೆ ಪರಿಸ್ಥತಿ ಮತ್ತು ಘಟನೆಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಪರಿಶೀಲಿಸದರೆ ಹೊಸ ಸಾದ್ಯತೆಗಳನ್ನು ಹುಡುಕಬಹುದು ಅನ್ನು ಆಶಯವಷ್ಟೆ.
ಬಸವಣ್ಣನವರು ಆಗಿನ ಕಾಲಕ್ಕೆ ಸಮಾಜ ವಿರೋಧಿ ಕ್ರಾಂತಿಕಾರಕ ಕಾರ್ಯಗಳನ್ನು ಅನೇಕ ಅಡ್ಡಿ ಆತಂಕಗಳ ನಡುವೆಯೂ ನಡೆಸಿಕೊಂಡು ಹೋದರು. ಅವು ಒಂದು ವರ್ಗದ ಜನರಿಗೆ ಅಪಥ್ಯವಾಗಿದ್ದರೆ ಬಹುಜನರಿಗೆ ಅದರಲ್ಲೂ ಶೋಷಿತರಿಗೆ ಕಲ್ಯಾನವನ್ನುಂಡುಮಾಡುವಂತಿದ್ದವು. ಅವರು ಮುಖ್ಯವಾಗಿ ವಿರೋಧಿಸಿದ್ದು ಬದಲಾವಣೆ ತರಲು ಪ್ರಯತ್ನಸಿದ್ದು, ಮೂಡನಂಬಿಕೆ, ಜೀವ ವಿರೋಧಿ ಸಂಪ್ರದಾಯ, ಶಾಸ್ತ್ರ, ಸ್ತ್ರೀ ಪುರುಷರ ನಡುವಿನ ಅಸಮಾನತೆ, ಜಾತಿ ವರ್ಣ ಬೇಧ, ಹಣ ಸಂಪತ್ತಿನ ಸಂಗ್ರಹ ಹಾಗು ವರ್ಗ ಅಸಮಾನತೆ. ಜೊತೆಗೆ, ಕಾಯಕವೇ ಕೈಲಾಸ ದಯವೇ ಧರ್ಮದ ಮೂಲ, ಪ್ರತಿಯೊಬ್ಬರೂ ದುಡಿದು ಬದುಕಬೇಕು, ಅಂತರಂಗ ಶುಧ್ಧಿ, ಎಲ್ಲರೂ ಸಮಾನರು ಎಂಬ ತತ್ವಗಳನ್ನು ಸಾರಿದರು. ಈವುಗಳನ್ನು ಜಾರಿಗೆ ತರಲು ನಿರಂತರ ಪ್ರಯತ್ನ ನಡೆಸಿದರು. ಅವರನ್ನು ಸಮಾಜ ವಿಮುಖರನ್ನಾಗಿ ಮಾಡಿದ ಕಟ್ಟ ಕಡೆಯ ಘಟನೆ  ಅಂತಾರ್ಜಾತಿ ವಿವಾಹ. ಬೇರೆಲ್ಲಾ ಸುಧಾರಣೆಯನ್ನು ವಿರೋಧದನಡುವೆಯು ಒಪ್ಪಕೊಂಡ ಸಮಾಜ ವರ್ಣಸಂಕರವನ್ನು ಮಾತ್ರ ತೀವ್ರವಾಗಿ ವಿರೋಧೀಸಿತು. ಇದನ್ನು ಉಹೆ ಮಾಡಬಹುದಾಗಿದ್ದ ಬಸವಣ್ಣನವರು ಕೆಲವು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬಹುದಾಗಿತ್ತು. ಅಂದರೆ ಉಂಟಾದ ಅತ್ಯಂತ ಧಾರುಣ ಅಂತ್ಯವನ್ನು ತಡೆದು ಅವರು ಕೈಗೊಂಡ ಚಳುವಳಿಯು ಪೂರ್ಣವಾಗಿ ನಾಶಹೊಂದದೆ ನಿಧಾನಗತಿಯಲ್ಲಾದರೂ ಎಲೆಮರೆಯಲ್ಲಾದರು ಮುಂದುವರೆಯುವಂತೆ ಮಾಡಬಹುದಿತ್ತು. ಏನು ಮಾಡಬಹುದಾಗಿತ್ತು ಅನ್ನುವುದನ್ನು  ನನ್ನ ಸೀಮಿತ ವೈಯಕ್ತಿಕ ಆಲೋಚನೆಗಳೊಂದಿಗೆ ತಿಳಿಸಲು ಇಚ್ಚಿಸುತ್ತೇನೆ
- ಅಂತಾರ್ಜಾತಿ ವಿವಾಹ ನೆರವೇರಿಸಿದ ತಕ್ಷಣ ವಧೂವರರನ್ನು ಮತ್ತು ಅವರ ಕುಟುಂಬದವರನ್ನು ಸ್ವಲ್ಪ ಕಾಲದ ಮಟ್ಟಿಗೆ ಬೇರೆ ಊರಿಗೆ ಕಳುಹಿಸಿ ರಕ್ಷಿಸಬಹುದಿತ್ತು
- ರಾಜನು ಕೈಗೊಳ್ಳಬಹುದಾದ ನಿರ್ಧಾರ ಮತ್ತು ಕಾರ್ಯಗಳನ್ನು ಅಂದಾಜು ಮಾಡಿ (ಅವರು ರಾಜಾಡಳಿತದಲ್ಲಿ ಇದ್ದುದರಿಂದ) ತಮ್ಮ ಗಡಿಪಾರು ಆದೇಶ ನೀಡುವ ಮೊದಲೆ ರಾಜಿನಾಮೆ ನೀಡಿ ಹೊರಬರಬಹುದಿತ್ತು.
- ತಮ್ಮ ಬೆಂಬಲಿಗರು ಮತ್ತು ಶರಣ ಸಮೂಹದ ಜೀವ ರಕ್ಷಣೆಗೆ, ಸಾಹಿತ್ಯ ಕೃತಿಗಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕಿತ್ತು.
- ರಾಜಾಜ್ಞ್ನೆ ಮತ್ತು ವಿರೋಧಿಗಳ ಕುತಂತ್ರಗಳಿಂದ ರೋಷಗೊಂಡ ಶರಣರನ್ನು ನಿಯಂತ್ರಿಸಿ ಅವರನ್ನು ಮೊದಲೆ ಚಳುವಳಿ ಪ್ರಚಾರಕ್ಕೆ ಬೇರೆ ಬೇರೆ ಸ್ಥಳಗಳಿಗೆ ನಿಯೋಜಿಸಬೇಕಿತ್ತು
- ತಮ್ಮ ಚಳುವಳಿ ಸಿದ್ದಾಂತ ತತ್ವಗಳನ್ನು ಭವಿಷ್ಯದ ಧೀರ್ಘಕಾಲದಲ್ಲಿ ಆಚರಣೆಂiÀಲ್ಲಿ ಉಳಿಸಿ ಬೆಳೆಸುವಂತಹÀ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕಿತ್ತು ( 800 ವರ್ಷಗಳ ನಂತರವೂ ಅವು ಉಳಿದಿವೆ ಆದರೆ ಮಾತಿಗೆ, ಉಪದೇಶಕ್ಕೆ, ರಾಜಕೀಯ ಲಭಕ್ಕಷ್ಟೆ ಬಳಸಿಕೊಳ್ಳಲಗುತ್ತಿದೆ ಆಚರಣೆಯಲ್ಲಿ ಇಲ್ಲ) 
- ಬಸವಣ್ಣನವರಿಗೆ ತುಂಬ ವಯಸ್ಸು ಆಗಿರಲಿಲ್ಲ. ಎಲ್ಲವನ್ನು ತೊರೆದು ಕೂಡಲಸಂಗಮದಲ್ಲಿ ಐಕ್ಯವಾಗುವ ಬದಲು ಸಳಾಂತರಗೊಂಡು ತಮ್ಮ ಚಳುವಳಿಯನ್ನು ಮುಂದುವರೆಸಬಹುದಿತ್ತು
ಬಹುಶ: ಹೋರಾಟ ಕ್ರಾಂತಿಗಳಲ್ಲಿ ತೊಡಗುವವರು, ಅದರ ನೇತ್ರತ್ವವನ್ನು ವಹಿಸುವವರು ತಮ್ಮ ಶ್ರಮ, ಸಮಯ, ಬೌಧ್ದಿಕ ಸಾಮಥ್ರ್ಯಗಳನ್ನು ಸಂಪೂಣಶವಾಗಿ ಧಾರೆ ಎರೆದಿರುತ್ತಾರೆ. ಅದರ ಪ್ರಖರತೆ ತೀವ್ರವಾಗಿರುವುದರಿಂದ ಕಡಿಮೆ ಅವಧಿಯಲ್ಲೆ ಕ್ಷೀಣಿಸಲಾರಂಬಿಸುತ್ತದೆ. ಕ್ರಾಂತಿಯ ಲಕ್ಷಣವೆ ಅಂತದ್ದು. ಎಷ್ಟು ಕ್ಷಿಪ್ರವಾಗಿ  ಬೆಳೆಯುತ್ತದೋ ಅಷ್ಟೇ ವೇಗದಲ್ಲಿ ಕ್ಷೀಣಿಸುತ್ತದೆ. ಆದರೆ ಅದರ ಪ್ರಭಾವ, ಪರಿಣಾಮ ಮತ್ರ ಧೀರ್ಘಕಾಳದಾಗಿರುತ್ತದೆ. ಬಸವಣ್ಣನವರ ಕ್ರಾಂತಿ 25-30 ವರ್ಷಗಳು ನಡೆದಿರಬಹುದು. ಇತಿಹಾಸದ ಕಾಲಘಟ್ಟದಲ್ಲಿ ಅದು ಅತ್ಯಂತ ಅಲ್ಪಾವಧಿ. 800 ವರ್ಷಗಳ ನಂತರವೂ ಅದು ಂಉಳಿದಿದೆ ಎಂದರೆ ಅದರೆ ಪ್ರಭಾವದ ತೀಕ್ಷಣತೆಯನ್ನು ಸೂಚಿಸುತ್ತದೆ. ಒಂದು ವೇಳೆ ಬಸವಣ್ಣನವರು ಕ್ರಾಂತಿಯನ್ನು ಇನ್ನೂ ಕೆಲವು ವರ್ಷ ಮುಂದುವರೆಸಿ ತತ್ವ ಸಿದ್ದಾಂತಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಿದಿದ್ದರೆ ಮುಂದಿನ ಶತಮಾನಗಳಲ್ಲಿ ಅವುಗಳ ಅನುಕರಣೆ ಆಚರಣೆಯ ಸಾದ್ಯತೆ ಹೆಚ್ಚುತ್ತಿತ್ತು ಎಂದು ನನ್ನ ಭಾವನೆ. ನಾನು ಹೇಳಿರುವುದೆಲ್ಲ ನನ್ನ ಅನಿಸಿಕೆಗಳಷ್ಟೆ ಅದನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ.
ಹೇಮಲತ ಎಚ್.ಎಮ್
# 79/7 ಸಣ್ಣಪ್ಪ ಮಾರ್ಗ
ಟೆಲಿಕಾಂ ಬಡಾವಣೆ
ಬೋಗಾದಿ ಮೊದಲನೆ ಹಂತ
ಮೈಸೂರು 570009
9449662032

ಪುಸ್ತಕ ಪ್ರೀತಿ - ದೇವಾಂಗನಾ ಶಾಸ್ತ್ರೀ ಯವರ ಕಥಾಸಂಕಲನ



ದೇವಾಂಗನೆಯವರು ಸಮಕಾಲೀನ ಲೇಖಕಿಯರಾದ ತ್ರಿವೇಣಿ, ಕೊಡಗಿನ ಗೌರಮ್ಮ ಅವರುಗಳಂತೆ ತಮ್ಮ ಸುತ್ತ ಮುತ್ತಲಿನ ಮಹಿಳೆಯರ ಸಮಸ್ಯೆಗಳನ್ನು ಕುರಿತು ಬರೆಯುತ್ತಿದ್ದರು. ಸಣ್ಣ ಸಣ್ಣ ಕಥೆಗಳ ಮೂಲಕ ಇವರು ಸಮಾಜದಲಿ ಮಹಿಳೆಯರ ಸ್ಥಿತಿಗಳನ್ನು ತೋರಿಸಿದ್ದಾರೆ. ಜನರ ಮೌಢ್ಯತೆಯ ಬಗ್ಗೆಯೂ ಬರೆದಿದ್ದಾರೆ. ಬರೆದದ್ದು ಸ್ವಲ್ಪವಾದರೂ ಸ್ತ್ರೀ ಪರ ವಿಚಾರವಾದಿಯಾಗಿದ್ದಾರೆ.  ಅವರ ಸಣ್ಣ ಕಥೆಗಳ ಪರಿಚಯ ನಿಮ್ಮ ಮುಂದಿಡುತ್ತಿದ್ದೇನೆ.
ವೇಣೀಸಂಹಾರ 
ಪೌರೋಹಿತ್ಯ ಮಾಡಿ ಜೀವನ ನಿರ್ವಹಣೆ ಮಾಡಿ ಕೊಂಡಿದ್ದ ಶಂಭು ತನ್ನ ಮುದ್ದಿನ ಮಗಳು ಏಳು ವರ್ಷದ ಶಾಂತೆಯನ್ನು ನಲವತ್ತೈದು ದಾಟಿದ ಚಿದಾನಂದ ದೀಕ್ಷಿತರೊಂದಿಗೆ ವಿವಾಹ ಮಾಡಿದನು. ಆದರೆ  ವರ್ಷದೊಳಗೆ ದೀಕ್ಷಿತರು ಮರಣಿಸಿದರು. ಮಗಳು ಚಿಕ್ಕವಳೆಂದು ಕೇಶಮುಂಡನ ಮಾಡಿಸಿರಲಿಲ್ಲ. ಶಾಂತೆ ಬೆಳೆದಂತೆ ಅವಳ ಕೇಶವೂ ಬೆಳೆದು  ಕಣ್ಸೆಳೆಯುತ್ತಿತ್ತು. ಅದೇ ತನ್ನ ಪೌರೋಹಿತ್ಯಕ್ಕೆ ಅಡ್ಡಿಯಾಯಿತೆಂದು ಅವಳಿಗೆ ಕೇಶಮುಂಡನ ಮಾಡಲು ನಿರ್ಧರಿಸಿದನು. ವಿಷಯ ತಿಳಿದ ಶಾಂತೆ ತುಂಬಾ ವೇದನೆ ಪಟ್ಟಳು. ಕನ್ನಡಿಯ ಮುಂದೆ ನಿಂತು ಕೂದಲಿಗೆ ಎಣ್ಣೆ ಹಚ್ಚಿ ತುರುಬು ಹಾಕಿ ಅಲಂಕಾರ ಮಾಡಿಕೊಳ್ಳುತ್ತಿರುವಾಗಲೇ ಹಜಾಮನ ದನಿ ಕೇಳಿ ಮೂರ್ಛೆ ಹೋದಳು. ಅವಳು ಆ ಸ್ಥಿತಿಯಲ್ಲಿರುವಾಗಲೇ ಹಜಾಮನ ಮುಂದೆ ಕೂರಿಸಿದರು.ಅಣ್ಣ ವಿರೋಧಿಸಿದರು ಅಪ್ಪ ಇವನ ಮಾತನ್ನು ಕೇಳದೆ ಕೇಶ ತೆಗೆಯಲು ಹೇಳಿದನು.  ನೀರು ಚಿಮುಕಿಸಿದ್ದರಿಂದ ಎಚ್ಚರಗೊಂಡ ಶಾಂತೆ  ಬಿದ್ದಿದ್ದ ಕೇಶರಾಶಿಯನ್ನು ಕಂಡು " ಅಯ್ಯೋ ಅಣ್ಣ! ನನಗಾರೂ ಇಲ್ಲ. ತಂದೆ ತಾಯಿ ಎಲ್ಲ ಸತ್ತುಹೋಗಿದ್ದಾರೆ ನಾನೂ ಸತ್ತೆ!" ಎನ್ನುತ್ತಾ ಕುಸಿದಳು.
"ಅಂತೂ ಧರ್ಮ ಉಳಿದು ಕೊಂಡಿತು. ಪರಲೋಕದ ಗಂಡನಿಗೆ ಆಹಾರದ ಜೊತೆಯಲ್ಲಿ ಭೂಲೋಕದಲ್ಲಿನ ಹೆಂಡತಿಯ ತಲೆಗೂದಲಿನ ನೀರು ಬೆರೆಸಿ ಕೊಳ್ಳುವುದು ತಪ್ಪಿತು. ಹೆಣ್ಣು ಮಡಿಯಾದಳು, ಸ್ವರ್ಗಕ್ಕೆ ಹಾದಿ ನಿರಂತರವಾಯಿತು " ಎಂದು ಹೇಳಿರುವುದು ಜನರ ಮೌಢ್ಯವನ್ನು ತೋರಿಸುತ್ತದೆ.

ಹಾರೇಗೋಲು
ಬಡತನ ಏನನ್ನಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಭುವನೇಶ್ವರಿಯ ಮತ್ತು ರಾಮಾವಧಾನಿಗಳ ಮದುವೆಯೇ ಒಂದು ಉದಾಹರಣೆ. ತನ್ನ ತಂದೆಗಿಂತ ಎರಡು ವರ್ಷ ದೊಡ್ಡವರಾದ ಹಾಗೂ ನಾಲ್ಕನೆಯ ಮದುವೆಯಾಗುತ್ತಿರುವ  ಅವಧಾನಿಗಳನ್ನು ಒಪ್ಪಲು ಬಡತನವೇ ಕಾರಣ. ಮಗನ ಮದುವೆ ಮಾಡುವ ವಯಸ್ಸಿನಲ್ಲಿ ಮದುವೆಯಾಗಲು ಅವಧಾನಿಗಳು ಕೊಟ್ಟ ಕಾರಣ ಮನೆಯಲ್ಲಿ ಕೆಲಸ ಮಾಡಲು ಹೆಣ್ಣು ಮಗಳಿಲ್ಲ ಎಂದು. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದು ಅವಧಾನಿಗಳು  ಇಹಲೋಕ ತ್ಯಜಿಸಿದರು. ಇವರ ಸ್ವರ್ಗಾರೋಹಣಕ್ಕೆ ಅನುಕೂಲವಾಗಲು ಮಡದಿ ಭುವನೇಶ್ವರಿಯನ್ನು ಶುದ್ಧಿ ಮಾಡಿದರು. ಇದೀಗ ಅರಳಬೇಕಾಗಿದ್ದ ಅವಳ ಜೀವನ ವೈಧವ್ಯದಲ್ಲಿ ನರಳಬೇಕಾಯಿತು. ಭುವನೇಶ್ವರಿ ಮತ್ತು ಅವಧಾನಿಗಳ ಮಕ್ಕಳ ನಡುವೆ ಜಗಳ ಪ್ರಾರಂಭವಾಯಿತು. ಭುವನೇಶ್ವರಿ ಮನೆ ಬಿಟ್ಟು ಹೊರ ಬಂದಳು.
ಭತ್ತಅವಲಕ್ಕಿಗಳನ್ನು ಕುಟ್ಟುವ ಕಾಯಕ ಮಾಡುತ್ತಾ ತಂದೆ ಮತ್ತು ತಂಗಿಯರನ್ನು ಪೋಷಣೆ ಮಾಡುತ್ತಿದ್ದಳು. ಹೀಗಿರುವಾಗ ಪುರೋಹಿತರ ಮನೆಯಲ್ಲಿ ಭತ್ತ ಕುಟ್ಟುವ ಸಲುವಾಗಿ ತನ್ನ ತವರೂರಿಗೆ ಬಂದಳು ಭುವನೇಶ್ವರಿ. ಪುರೋಹಿತರ ಮಗ ಮಾಧವ ಮೊದಲೇ ಪರಿಚಿತನಾಗಿದ್ದರೂ ಇವಳ ಜೊತೆ ಅನುಚಿತವಾಗಿ ನಡೆದುಕೊಂಡನು. ಕೈಯಲ್ಲಿದ್ದ ಹಾರೇಕೋಲಿನ ಸಹಾಯದಿಂದ ತನ್ನ ಶೀಲವನ್ನುಳಿಸಿಕೊಂಡಳು. ಈ ಘಟನೆಯಿಂದ ಅವಳಲ್ಲಿ ಪುರುಷ ಜಾತಿಯ ಮೇಲೇ ಜಿಗುಪ್ಸೆ ಉಂಟಾಯಿತು. ಹೀಗೆ ಸಮಸ್ಯೆಗಳು ಯಾರನ್ನಾದರೂ ಹೇಗೆ ಬೇಕಾದರೂ  ಬದಲಾಯಿಸುತ್ತದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ.

 ನಾಲ್ಕುನೂರು 
ಗೆಳತಿ ಇಂದಿರೆಯ ಮದುವೆ ಜೋಯಿಸರು ಮಗನೊಂದಿಗೆ ನಿಶ್ಚಯವಾಯಿತು. ವರದಕ್ಷಿಣೆಯಾಗಿ ಐನೂರು ರೂಗಳನ್ನು ಕೊಡಲು ಒಪ್ಪಿಕೊಂಡಿದ್ದರು ಇಂದಿರೆಯ ತಂದೆ. ಆದರೆ ಅದನ್ನು  ಕೊಡದ್ದರಿಂದ ಎರಡೂ ಕಡೆಯವರಿಗೂ ಘರ್ಷಣೆ ನಡೆಯಿತು. ನೂರು ರೂಗಳನ್ನು ಈಗ ಕೊಡುವೆ ಉಳಿದ ನಾನೂರು ರೂಗಳನ್ನು ನಂತರ ಕೊಡುತ್ತೇವೆ ಎಂದು ಒಪ್ಪಿ ಮದುವೆ ಮುಗಿಸಿದರು. ಸ್ವಲ್ಪ ದಿನದಲ್ಲೇ ತಂದೆ ತೀರಿಹೋದರು. ವರದಕ್ಷಿಣೆ ಹಣ ಬರಲಿಲ್ಲವೆಂದು ಇಂದಿರೆಗೆ ಹಿಂಸೆ ಕೊಡುತ್ತಿದ್ದರು. ತಾಯಿ ತನ್ನ ಬಳಿಯಿದ್ದ ಆಭರಣಗಳನ್ನು ಮಾರಿ ಕೊಡಲು ನಿರ್ಧರಿಸಿದಳು. ಆದರೆ ಇದ್ದ ಅಲ್ಪಸ್ವಲ್ಪ ಆಭರಣಗಳನ್ನೂ ಯಾರೋ ಅಪಹರಿಸಿದರು. ಇಂದಿರೆಯ ಗಂಡ ತಂದೆ ತಾಯಿ ಹೇಳಿದಂತೆ ಕೇಳುತ್ತಿದ್ದನು. ಸಾಲದೆಂಬಂತೆ ಇಂದಿರೆಯ ಮೇಲೆ ಮಾವನ ಕಣ್ಣು ಬಿದ್ದಿತು. ಕೊನೆಗೆ ಅವಳ ನಡತೆ ಸರಿಯಿಲ್ಲವೆಂದು ಗರ್ಭಿಣಿಯಾದ ಅವಳನ್ನು ಮನೆಯಿಂದ ಹೊರ ಹಾಕಿದರು. ಸರಳಾ ಇಂದಿರೆಯನ್ನು ತವರು ಮನೆಗೆ ಕರೆದುಕೊಂಡು ಬಂದಳು. ಇಂದಿರೆ ಗಂಡು ಮಗುವಿನ ತಾಯಿಯಾದಳು. ಉಳಿದ ವರದಕ್ಷಿಣೆ ಹಣವನ್ನು ಕೊಟ್ಟರೆ ಮಾತ್ರ ಸೊಸೆಯನ್ನು ಮನೆಗೆ ಕರೆದುಕೊಳ್ಳುತ್ತೇವೆ ಎಂದು ತಾಯಿಗೆ ತಿಳಿಸಿದರು ಇಂದಿರೆಯ ಮಾವ. ತಾಯಿ ಹೊಲವನ್ನು ಒತ್ತೆಯಿಟ್ಟು ನಾನೂರು ರೂಗಳೊಂದಿಗೆ ಮಗಳನ್ನು ಗಂಡನ ಮನೆಗೆ ಕಳುಹಿಸಿದಳು. ಗಂಡನ ಎರಡನೇ ಮದುವೆಯ ದಿಬ್ಬಣವು ಇವಳನ್ನು ಎದಿರುಗೊಂಡಿತು. ನೋಡಿದ ಇಂದಿರೆ ಅಲ್ಲೇ ಅಳುತ್ತಾ ಕುಳಿತಳು. 

ವರದಕ್ಷಿಣೆ
ರಾಮು ಮತ್ತು ಲೀಲಾ ಇಬ್ಬರೂ ಓದುತ್ತಿರುವಾಗಲೇ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವಂತೆ ಲೀಲಾಳ ತಂದೆ ರಾಮುವಿನ ಮನೆಗೆ ಬಂದರು. ರಾಮುವಿನ ಅಪ್ಪ ಮಗನಿಗೆ ವರದಕ್ಷಿಣೆ  ಕೊಟ್ಟರೆ ಮಾತ್ರ ಮದುವೆ ಎಂದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಈ ಮದುವೆಯಿಂದ ನಡೆಯುವುದಿಲ್ಲ ಎಂದರು.
ವಿಷಯ ತಿಳಿದ ರಾಮು ಲೀಲಾಳನ್ನಲ್ಲದೆ ಬೇರಾರನ್ನು ಮದುವೆಯಾಗುವುದಿಲ್ಲ ಎಂದು ನದಿಗೆ ಧುಮುಕಿ ಪ್ರಾಣ ಬಿಟ್ಟನು. ಪತ್ರಿಕೆಯಲ್ಲಿ ರಾಮುವಿನ ಮರಣದ ವಿಷಯವನ್ನು  ಓದಿದ ಲೀಲಾಳು ಸಹ ಆತ್ಮಹತ್ಯೆ ಮಾಡಿಕೊಂಡಳು.

ಅಡ-ಕತ್ತರಿ
ಮದುವೆ ದಿಬ್ಬಣದ ಜೊತೆ ಹೋಗುತ್ತಿದ್ದ ಗೌರಿ ಗೆಳತಿ ವಾಣಿಯನ್ನು ನೀನು ಮದುವೆಗೆ ಬರುವುದಿಲ್ಲವಾ? ಕೇಳಿದಳು." ಛೀ ಛೀ ಚಟ್ಟಕ್ಕೇರುವ ಮದುಮಗನಿಗೆ ಎಳೆಹುಡುಗಿಯೊಡನೆ ಮದುವೆ, ನೋಡು ಹೆಂಗಸರೊಬ್ಬರೂ ದಿಬ್ಬಣಕ್ಕೆ ಬರುವುದಿಲ್ಲವೆಂದು ಸತ್ಯಾಗ್ರಹ ಹಿಡಿದರೆ ಈ ಆಸಡ್ಡೆ ಹೇಗೆ ನಡೆಯುತ್ತಿತ್ತು." ಎಂದು ಬಾಲ್ಯವಿವಾಹವನ್ನು ವಿರೋಧಿಸುತ್ತಿದ್ದಳು. ಇದನ್ನು ಕೇಳಿದ ಗೌರಿ ಗೆಳತಿಗೆ ತನ್ನ ಕಥೆಯನ್ನು ಹೇಳಿದಳು. ಗಂಡ ತಿಮ್ಮಣ್ಣ ನೋಡಲು ಸುಂದರನಾಗಿದ್ದ. ಆದರೆ ನಡತೆ ಅರಿತಿರಲಿಲ್ಲ. ಊರಿನಲ್ಲಿ ಎಲ್ಲಾ ಹೆಂಗಳೆಯರಿಂದಲೂ ಬೈಗುಳ ಪಡೆಯುತ್ತಿದ್ದನು. ಮನಸ್ಸಿಲ್ಲದೆ ನನ್ನ ಮದುವೆಯಾದರು. ಗಂಡನಿಗೆ ಬೇಡವಾದ ನನ್ನ ಮೇಲೆ ಮಾವನ ಕಣ್ಣು ಬಿದ್ದಿತು. ತನ್ನ ಆಸೆ ಈಡೇರಲಿಲ್ಲವೆಂದು ಗೌರಿಯ ನಡತೆ ಸರಿಯಿಲ್ಲವೆಂದು ಮಗ ತಿಮ್ಮಣ್ಣನಿಗೆ ಚಾಡಿ ಹೇಳಿದ ಅಪ್ಪ. ಗಂಡ ಮಡದಿಯನ್ನು ಹೊಡೆದು ಮನೆಯಿಂದ ಹೊರ ಹಾಕಿದ. ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎಂಬಂತೆ ಅಲ್ಲೇ ಜಗಲಿಯ ಮೇಲೆ ಕುಳಿತಳು. ನಂತರ ಮಾವ ಒಳಗೆ ಕರೆದುಕೊಂಡು ಹೋದನು. "ಮುದುಕನ ಮದುವೆ ಎಂದು ನೀನೆಷ್ಟು ರೇಗುತ್ತೀಯಾ? ನನಗಂತೂ ನನ್ನನ್ನು ಮಗನಿಗೆ ಕೊಡದೆ ತಂದೆಗೆ ಕೊಟ್ಟರಾಗುತ್ತಿದ್ದಲ್ಲವೆ? ಎಂಬ ಗೌರಿಯ ಮಾತಿನಿಂದ ಅವಳು ಬೇಡದ ಮದುವೆಯಿಂದ ಎಷ್ಟು ನೊಂದಿರುವಳು ಎಂಬುದನ್ನು ತಿಳಿಸಿದ್ದಾರೆ. ಹೀಗೆ ಮಾವ - ಮಗನ ಬೇಕು ಬೇಡಗಳ ನಡುವೆ ಗೌರಿಯ ಜೀವನ ಹೇಗಿತ್ತೆಂಬುದು ಊಹಿಸಲಸಾಧ್ಯ. 

    -  ವಿಜಯಲಕ್ಷ್ಮಿ ಎಂ. ಎಸ್


ಪುಟಾಣಿ ಕಥೆ



ಪುಟಾಣಿ ಕಥೆ - ೧
"ಪ್ರೀತಿಗೆ ಇಷ್ಟೇಕೆ ಬರಗೆಟ್ಟು ಕುಳಿತಿರುವೆ?" ಕೇಳಿದಳಾಕೆ.
"ಬರಬಿದ್ದ ಭೂಮಿಯಲ್ಲಿ ಹಸಿರ ಚಿಗುರಿಸಲು ಸಾಧ್ಯವಾಗುವುದು ಮಳೆಗೆ ಮಾತ್ರವಲ್ಲವೇ? "

ಪುಟಾಣಿ ಕಥೆ - ೨
ಪ್ರತಿದಿನ ಆ ಹುಡುಗ ಕಡಲೆಕಾಯಿ ಮಾರಲು ಬರುತ್ತಿದ್ದ. ಪ್ರತಿದಿನ ಕಾರಿನ ಒಡೆಯ ತಿನ್ನಲು ಸಮಯವಿಲ್ಲವೆಂದು ಹೇಳಿ ನಿರಾಕರಿಸುತ್ತಿದ್ದ.  ಒಂದು ದಿನ ಆ ಹುಡುಗ ಕೇಳಿದ, "ಕಡಲೆಕಾಯಿ ಸಹ ತಿನ್ನಲಾಗದಿದ್ದರೆ, ಮತ್ತೆ ಇಷ್ಟೊಂದು ದುಡಿಯೋದು ಯಾಕೆ ಸರ್?!!" 

ಪುಟಾಣಿ ಕಥೆ - ೩
"ಓದಿದವರನ್ನು ಮಾತ್ರ ಗೌರವಿಸಬೇಕೇ? " ಕೇಳಿದ ಶಿಕ್ಷಕಿಯನ್ನು ವಿದ್ಯಾರ್ಥಿಯೊಬ್ಬ.
"ಅದರ ಅವಶ್ಯಕತೆ ಇಲ್ಲಪ್ಪ."
"ಮತ್ತೇಕೆ ಓದು, ಓದು ಎನ್ನುವಿರಿ?" ಪ್ರಶ್ನಿಸಿದ.
"ವಿದ್ಯೆ ಬದುಕನ್ನು ಗೌರವಿಸುವುದನ್ನು ಕಳಿಸಿಕೊಡುತ್ತದೆ!!

ಪುಟಾಣಿ ಕಥೆ - ೪
ಧರ್ಮದ ವಿಷಯದಲ್ಲಿ ಜೋರು ಜೋರು ಜಗಳವಾಡುತ್ತಿದ್ದ ಅವರು ಇನ್ನೇನು ಕೈಕೈಮಿಲಾಯಿಸಬೇಕೆನ್ನುವಷ್ಟರಲ್ಲಿ,  ಅವರಿಬ್ಬರ ಅಮ್ಮಂದಿರು ಒಟ್ಟಿಗೆ ವಾಕಿಂಗ್ ಹೊರಟಿದ್ದು ಕಂಡು ದಂಗಾದರು! !

ಪುಟಾಣಿ ಕಥೆ - ೫
ಚಂದ್ರ ಪುಟ್ಟ ಕಂದನಿಗೆ ಹೇಳಿದ " ನಾನು ಒಂದು ದಿನ ಕಾಣಲಿಲ್ಲವೆಂದು ಮುನಿಸಿಕೊಂಡು ಉಳಿದ ೧೪ ದಿನಗಳೂ ಸಹ ಆಕಾಶದೆಡೆಗೆ ನೋಡುವುದನ್ನೇ ಬಿಟ್ಟೆ, ಸರಿಯೇ?"

ಪುಟಾಣಿ ಕಥೆ - ೬
ಹೊಸ ನೋಟು ಹಳೇ ನೋಟನ್ನು ನೋಡಿ ನಕ್ಕಿತು,  "ನೋಡಿದೆಯಾ, ನನ್ನ ಮಹಿಮೆ. ಕಪ್ಪು ಹಣವನ್ನು ತೊಡೆದು ಹಾಕುತ್ತೇನೆಂದು ನಮಗೆಷ್ಟು ಮರ್ಯಾದೆ?"
ಹಳೇ ನೋಟು ವಿಷಾದದ ನಗು ನಕ್ಕು ಹೇಳಿತು, "ನಾನೂ ನಿನ್ನಂತೆ ಬೀಗಿದ್ದೆ!!

ಪುಟಾಣಿ ಕಥೆ - ೭
ಮದುವೆಯಾದ ಎರಡು ವರ್ಷಗಳಲ್ಲಿ ಗಂಡ ಬಿಟ್ಟು ಹೋದ ನಂತರ ಆ ಹೆಣ್ಣು ಮಗಳು ಸಂಸಾರದ ಜವಾಬ್ದಾರಿ ನಿಭಾಯಿಸಿದ್ದಳು.  25 ವರ್ಷಗಳಾದ ಮೇಲೆ ಅವನು ತಿರುಗಿ ಬಂದ. ಎಲ್ಲರೂ ಹೇಳಿದರು "ಸೇರಿಸಿಕೊ, ನಿನಗೆ ಆಸರೆಯಾಗಿರುತ್ತಾನೆ."
ನಕ್ಕು ನುಡಿದಳಾಕೆ "ಜೀವನದ ಹದಿನೈದಾಣೆ ಭಾಗದಲ್ಲಿ ಅವನಿರಲಿಲ್ಲ,  ಉಳಿದ ಒಂದು ಭಾಗಕ್ಕೆ ಅವನ ಅವಶ್ಯಕತೆ ಇದೆಯೇ?"

ಪುಟಾಣಿ ಕಥೆ - ೮
ಆಕೆ ಪ್ರೀತಿಯನ್ನು ಗಣಿಸುತ್ತಿದ್ದಾಗ
ಅವನು ಹಣವನ್ನು ಎಣಿಸುತ್ತಿದ್ದ! !

ಪುಟಾಣಿ ಕಥೆ - ೯
ಎಂಜಲು ಕೈಯಲ್ಲಿ ಕಾಗೆ ಓಡಿಸುವುದು ಹೇಗೆ ಎಂದು ಚಿಂತಿಸುತ್ತಾ ನಿಂತ ವ್ಯಕ್ತಿ ಒಂದೆಡೆ, ಅಗಳು ಬಿದ್ದರೆ ಬಳಗವನ್ನೆಲ್ಲ ಕರೆಯಲು ಬಾಯ್ತೆರೆದು ನಿಂತ ಕಾಗೆ ಇನ್ನೊಂದೆಡೆ!

ಪುಟಾಣಿ ಕಥೆ - ೧೦
ತನ್ನ ಗಂಡನಿಗೆ ಇನ್ನೊಂದು ಸಂಬಂಧ ಇದೆ ಎಂದು ತಿಳಿದಾಗ ಆಕೆಗೆ ದಿಗ್ಭ್ರಮೆಯಾಯಿತು. ಚೇತರಿಸಿಕೊಂಡ ಆಕೆ ವಿಚ್ಛೇದನೆಗೆ ಅರ್ಜಿ ಸಲ್ಲಿಸುತ್ತೇನೆಂದಾಗ ಎಲ್ಲರೂ ಹಾಸ್ಯ ಮಾಡಿದರು. "ನನ್ನ ಭಾವನೆಗೆ, ವ್ಯಕ್ತಿತ್ವಕ್ಕೆ ಧಕ್ಕೆ ನೀಡಿದ ವ್ಯಕ್ತಿಯೊಂದಿಗೆ ನಾ ಬದುಕಲಾರೆ." ಆಗ ಆಕೆಯ ವಯಸ್ಸು 58!!

ಪುಟಾಣಿ ಕಥೆ - ೧೧
ಕ್ಯಾನ್ಸರ್ ಎಂದ ಕೂಡಲೆ ಆ ಧೈರ್ಯವಂತೆ ಸಹ ಕುಸಿದುಹೋದಳು. ಅವಳಲ್ಲಿ ಜೀವನೋತ್ಸಾಹ ತುಂಬಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಒಂದು ದಿನ ಇದ್ದಕ್ಕಿದ್ದಂತೆ ಆಕೆಗೆ ಜ್ಞಾನೋದಯವಾಯಿತು. ತನಗೆ ಚಿಕಿತ್ಸೆ ನೀಡಲು ಬರುತ್ತಿದ್ದ, ಎಲ್ಲರೊಂದಿಗೆ ನಗುತ್ತಾ ಮಾತನಾಡುತ್ತಿದ್ದ, ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕಿರಿಯ ವೈದ್ಯೆಗೆ ವಾಸಿಮಾಡಲಾಗದ ಕ್ಯಾನ್ಸರ್ ಇದೆ ಎಂದು ತಿಳಿದಾಗ!!

ಪುಟಾಣಿ ಕಥೆ - ೧೨
ಮಗಳಿಗೆ ಬರೆಬರುವಂತೆ ಹೊಡೆದಿದ್ದಳು ತಾಯಿ. ವೈದ್ಯೆ ಕಾರಣ ಕೇಳಿದಳು.
"ಓದ್ತಾ ಇಲ್ಲ ಅಂತ ಹೊಡ್ದೆ."
"ಅಷ್ಟಕ್ಕೆ,  ಹೀಗಾ ಹೊಡೆಯೋದು? " 
"ಅದಕ್ಕೇ ಹೊಡ್ದೆ, ಅವಳ ಬದ್ಕು ನನ್ ತರಾ ಆಗ್ಬಾರ್ದು ಅಂತ" ಬಿಕ್ಕಳಿಸುತ್ತಾ ನುಡಿದಳಾ ತಾಯಿ.
    
ಪುಟಾಣಿ ಕಥೆ - ೧೩
"ನಾ ದುಡಿಯುತ್ತಿರುವುದೆಲ್ಲ ನಿನಗಾಗಿಯೇ." ದಿನಂಪ್ರತಿ ಗಂಡನ ಮಾತು ಹೆಂಡತಿಗೆ.
ಕೇಳಿ ಕೇಳಿ ರೋಸಿಹೋದ ಪತ್ನಿ ಒಂದು ದಿನ ಗಂಡನಿಗೆ ಹೇಳಿದಳು "ನನಗಾಗಿ ನೀವು ಮಾಡಿಸಿಕೊಟ್ಟ ಚಿನ್ನದ ಸರವನ್ನು ನನ್ನಿಚ್ಛೆಯಂತೆ ಅಮ್ಮನಿಗೆ ಕೊಟ್ಟುಬಿಟ್ಟೆ."
ಗರಬಡಿದವನಂತಾಗಿಬಿಟ್ಟಗಂಡ.
   
ಪುಟಾಣಿ ಕಥೆ - ೧೪
ಮೂರು ದಿನ ಕಂಪ್ಯೂಟರ್ ಕಲಿಯಲೆತ್ನಿಸಿದ ನಂತರ ತಾಯಿ "ಇದು ನನಗೆ ಬರುತ್ತಿಲ್ಲ.ನಾ ಕಲಿಯೋಲ್ಲ" ಎಂದಳು.
ಮಗಳು ನಿಧಾನವಾಗಿ "ಅಮ್ಮ ಮದುವೆಯಾದಾಗ ನಿನಗೆ ಅಡಿಗೆ ಮಾಡಲು ಬರುತ್ತಿರಲಿಲ್ಲ ಎಂದು ಹೇಳಿದ ನೆನಪು....." 
"ಸರಿ, ಪ್ರಾರಂಭಿಸು " ಕಂಪ್ಯೂಟರ್ ಮುಂದೆ ಕುಳಿತಳು ತಾಯಿ!!
    
ಪುಟಾಣಿ ಕಥೆ - ೧೫
"ಸ್ವಾತಂತ್ರ್ಯವೇನು ಎಂಬುದರ ಬಗ್ಗೆ ಜೋರು ಜೋರು ಚರ್ಚೆ ನಡೆಯುತ್ತಿತ್ತು. ಯಾರೋ ಹೇಳಿದರು ಬದುಕಿನ, ಶಿಕ್ಷಣದ, ಉದ್ಯೋಗದ ಸ್ವಾತಂತ್ರ್ಯ - ಹೀಗೆ.
ಒಬ್ಬಾಕೆ ಎದ್ದು ನಿಂತು ಹೇಳಿದಳು "ನಂಗೂ ಬಹಳ ಅನಿಸುತ್ತೆ. ಆದರೆ ಎಲ್ಲಕ್ಕಿಂತ ಮುಂಚೆ ಸೂರ್ಯೋದಯ ನೋಡಲು, ೧೦ ರೂಪಾಯಿಗೆ ನಂಗಿಷ್ಟ ಬಂದದ್ದನ್ನು ಕೊಳ್ಳಲು ನಂಗೆ ಸ್ವಾತಂತ್ರ್ಯ ಬೇಕು!!!"
   
ಪುಟಾಣಿ ಕಥೆ - ೧೬
ಆಗ ಆ ಮನೆ ತುಂಬ ಮಕ್ಕಳಿದ್ದರು.  ಈಗ ಆಕೆ ಒಬ್ಬಂಟಿ.
ಆಗ ಈ ಮನೆಯಲ್ಲಿ ಮಕ್ಕಳಿರಲಿಲ್ಲ. ನಂತರ ಎಲ್ಲೆಲ್ಲಿಂದಲೋ ಬಂದರು. ಈಗ ಮನೆಯಲ್ಲಿ ಜಾಗವೇ ಇಲ್ಲ!

ಕಥೆ - ನಿಜವಾದ ಶಿಕ್ಷಣ


   ದ್ವಿತೀಯ ಪಿಯುಸಿ ಓದುತ್ತಿದ್ದ ಸಹನಾ ಎಂದೂ ಯಾವುದೇ ಕಾರಣಕ್ಕೂ ತರಗತಿಗಳಿಗೆ ಗೈರು ಹಾಜರಾಗುತ್ತಿರಲಿಲ್ಲ. ಈ ವರ್ಷವೂ ಹೆಚ್ಚಿನ ಹಾಜರಾತಿ ಪಡೆವ ಹೆಗ್ಗಳಿಕೆ ಅವಳ ಮಡಿಲಿಗೆ ಬೀಳುವ ಸಂಭವವಿತ್ತು. ಅವಳ ತರಗತಿಯ ಕೆಲವು ವಿದ್ಯಾರ್ಥಿಗಳು ಅವಳನ್ನು ಈ ವಿಷಯದ ಬಗ್ಗೆ ಛೇಡಿಸುತ್ತಿದ್ದುದ್ದುಂಟು. 
   ಹೀಗಿರುವಾಗ ಅದೊಂದು ದಿನ ಕಾರಣಾಂತರಗಳಿಂದ ಕಾಲೇಜ್ 11.30ರಿಂದ ಆರಂಭವಾಗುತಿದ್ದುದರಿಂದ ಸಹನಾಳ ತಂದೆ ಚೆಕ್ ನೀಡಿ ಬ್ಯಾಂಕಿನಿಂದ ಹಣ ತರಲು ಹೇಳಿದರು. ಹಾಗಾಗಿ ಅವಳು 11-30ರ ಒಳಗೆ ಕೆಲಸ ಮುಗಿಸಿಕೊಂಡು ಕಾಲೇಜಿಗೆ ಹೋಗಬೇಕಿತ್ತು. ತಿಂಗಳ ಮೊದಲ ವಾರವಾದ್ದರಿಂದ ಬ್ಯಾಂಕ್ ಜನಭರಿತವಾಗಿರುತ್ತದೆ ಎಂಬುದನ್ನು ತಿಳಿದಿದ್ದ ಸಹನಾ ಬೇಗನೇ ಬಂದು ಅವಳ ಕೆಲಸವನ್ನು ಮುಗಿಸಿಕೊಂಡಾಗ 11 ಘಂಟೆಯಾಗಿತ್ತು. ಇನ್ನು 30 ನಿಮಿಷಗಳಲ್ಲಿ ಕಲೇಜಿಗೆ ಹೋಗಬೇಕೆಂದುಕೊಂಡು ಸರಸರನೆ ಹೆಜ್ಜೆ ಹಾಕಿದಳು.
   ಅಷ್ಟರಲ್ಲಿ ಅಲ್ಲೇನೋ ಜೋರು ಧ್ವನಿ ಕೇಳಿಸಿದಂತಾಗಿ ಶಬ್ಧ ಬಂದ ದಿಕ್ಕಿಗೆ ನೋಡಿದಾಗ ಬ್ಯಾಂಕಿನವರೊಬ್ಬರು ಒಬ್ಬ ಅಜ್ಜಿಯ ಮೇಲೆ ಕೂಗಾಡುತ್ತಿದ್ದುದ್ದನ್ನು ಕಂಡಳು. ಏನಿರಬಹುದೆಂದು ವಿಚಾರಿಸುವ ಮನಸ್ಸಾದರೂ, ಕಾಲೇಜಿಗೆ ಲೇಟಾಗುತ್ತದೆಂದು ಮುಂದೆ ನಡೆದಳು. ಆದರೆ ಏಕೋ ಏನೋ ಅವಳ ಮನಸ್ಸು ಒಪ್ಪಲಿಲ್ಲ. ವಿಚಾರಿಸಿಯೀ ಬಿಡೋಣವೆಂದು ಅಜ್ಜಿಯ ಬಳಿ ಹೋದಳು. 
ಅಜ್ಜಿ ಸಹನಾಳ ಪ್ರಶ್ನೆಗೆ ಉತ್ತರಿಸುತ್ತಾ, “ನಮ್ಮಂತಹ ವಯಸ್ಸಾದವರ ಗೋಳು ಯಾರು ಕೇಳುತ್ತಾರಮ್ಮ, ಹೆತ್ತ ಮಕ್ಕಳೇ ನಮ್ಮ ಬಗ್ಗೆ ಕಾಳಜಿ ವಹಿಸದಿದ್ದಾಗ, ಮೂರನೆಯವರು ನಮ್ಮ ಬಗ್ಗೆ ಕಾಳಜಿ ವಹಿಸಲು ಸಾಧ್ಯವೇ?” ಎಂದು ಹತಾಶರಾಗಿ ನುಡಿದರು. 
  ಆಗ ಸಹನಾ, “ಅಜ್ಜಿ, ನಿಮಗೀಗ ಬಂದಿರುವ ಕಷ್ಟವಾದರೂ ಏನು? ದಯವಿಟ್ಟು ಹೇಳಿ, ನನ್ನ ಕೈಲಾಗುವುದಾದರೆ, ನಾನು ಸಹಾಯ ಮಾಡುತ್ತೇನೆ”, ಎಂದಳು. 
“ಅಯ್ಯೊ, ನಿನ್ನಂತಹ ಪುಟ್ಟ ಹುಡುಗಿಗೆ ಹೇಳುವ ಕಷ್ಟವಲ್ಲಮ್ಮ, ಆದರೂ ಹೇಳುತ್ತೇನೆ ಕೇಳು. ನಾನು ನನ್ನ ಪತಿಯ ಪಿಂಚಣಿ ಹಣವನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಪ್ರತಿ ತಿಂಗಳೂ ಹೇಗೋ ಕಷ್ಟಪಟ್ಟು, ಈ ಉದ್ದ ಕ್ಯೂನಲ್ಲಿ ನಿಂತು ಹಣ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ ಈ ಬಾರಿ ಕ್ಯೂನಲ್ಲಿ ನಿಲ್ಲಲ್ಲು ಆಗುತ್ತಿಲ್ಲ. ನೆನ್ನೆಯಿಂದ ಸ್ವಲ್ಪ ಜ್ವರ ಇತ್ತು. ಈಗ ಏಕೋ ಕಣ್ಣು ಮಂಜಾಗುತ್ತಿದೆ, ತಲೆ ಸುತ್ತುತ್ತಿದೆ, ಮನೆಗೆ ಹೋಗಿ ನಾಳೆ ಬರೋಣವೆಂದರೆ, ಇಂದೇ ಹಣದ ಅವಶ್ಯಕತೆಯಿದೆ. ಆದ್ದರಿಂದ ಆ ಬ್ಯಾಂಕಿನವರ ಬಳಿ ಕೇಳಿಕೊಳ್ಳೋಣ ಎಂದು ಹೋದೆ, ಆ ವ್ಯಕ್ತಿ ಹಾಗೆ ಕೊಡಲು ಸಾಧ್ಯವೇ ಇಲ್ಲ, ನಿಮಗಿಂತ ಮುಂಚೆ ಬಂದವರಿರುತ್ತಾರೆ ಎಂದುಬಿಟ್ಟ. ದಯವಿಟ್ಟು ಏನಾದರೂ ಮಾಡಿ ಎಂದದ್ದಕ್ಕೆ ಕೂಗಾಡಿಬಿಟ್ಟ. ಈಗ ನಾನೇ ನಿಲ್ಲಬೇಕು. ಯಾರನ್ನು ಕೇಳಲಿ, ಎಲ್ಲರಿಗೂ ಅವರವರದೇ ತಾಪತ್ರಯಗಳು” ಎಂದು ನಿಟ್ಟುಸಿರಿಟ್ಟರು. 
    ಅಜ್ಜಿಯ ಕಥೆ ಕೇಳಿ ಸಹಾನಾಗೆ ಬೇಸರವಾಯಿತು. ಒಂದು ಘಳಿಗೆ ಕಾಲೇಜಿನ ನೆನಪಾದರೂ, ಮರುಕ್ಷಣವೇ, “ಅಜ್ಜಿ, ನೀವೇನೂ ಯೋಚನೆ ಮಾಡಬೇಡಿ. ಹಣ ನಾನು ತಂದುಕೊಡುತ್ತೇನೆ”, ಎಂದಳು. ಕ್ಯೂನಲ್ಲಿ ನಿಂತು ಹಣವನ್ನು ಪಡೆದು ಅಜ್ಜಿಗೆ ಕೊಟ್ಟಾಗ ಘಂಟೆ 1-30 ಆಗಿತ್ತು. ಅಂದು ಅವಳಿಗೆ ಕಾಲೇಜಿಗೆ ಹೋಗಲಾಗುವುದಿಲ್ಲ ಎಂದು ಗೊತ್ತಾದರೂ ಆ ಬಗ್ಗೆ ಅವಳಿಗೆ ಬೇಸರವಿರಲಿಲ್ಲ. ಬದಲಿಗೆ ವಯಸ್ಸಾದ ಹಿರಿಜೀವಕ್ಕೆ ಸಹಾಯ ಮಾಡಿದ ಸಂತೃಪ್ತಿಯಿತ್ತು. ಬ್ಯಾಂಕಿನಿಂದ ಮನೆಗೆ ಹಿಂತಿರುಗುವಾಗ, ಅಲ್ಲಿನ ಗೋಡೆಯ ಮೇಲೆ ನೇತಾಡುತ್ತಿದ್ದ “ಜನಸೇವೆಯೇ ಜನಾರ್ಧನ ಸೇವೆ” ಎಂಬ ಫಲಕವನ್ನು ನೋಡಿ, “ಓಹೋ ಇದೇ ಏನೋ ಬ್ಯಾಂಕಿನವರು ಮಾಡುವ ಜನಾರ್ಧನ ಸೇವೆ” ಎಂದು ತನ್ನೊಳಗೆ ನಗುತ್ತಾ ಹೊರ ನಡೆದಳು.
 - ದೀಪಾ ಜೆ 
[ಕೃಪೆ: ಅಪೂರ್ವ ಕಣ್ಮಣಿ ಮಾಸಪತ್ರಿಕೆ]

ಕವನ - ಆಸರೆ


ಹುಟ್ಟುತ್ತಲೇ ಬೇಡದವಳಾಗಿ 
ಬೆಳೆದ ನನಗೆ ನಾನೆ ಆಸರೆ
ಯಾರೇಕೆ ಬೇಕು ಬಾಳಿಗಾಸರೆ

ಒಡಹುಟ್ಟಿದವರು ದೂರಾದರು
ಕೈಹಿಡಿದವರು ದೂರಿದರು
ಆಪ್ತಮಿತ್ರರು ಹೊರನಡೆದರು
ಒಬೊಂಟಿಗಳಾದೆ, 
ನನಗೆ ನಾನೆ ಆಸರೆಯಾದೆ

ಬದುಕೆಂಬ ಮಹಾಪ್ರವಾಹದಿ 
ನೂರಾರು ಸಂಕಷ್ಟಳೆದುರಾಗಲು
ದಿಕ್ಕೆಟ್ಟು ಚಿಂತಿತಳಾದೆ
ಪ್ರವಾಹಕ್ಕೆ ಸಿಕ್ಕಿ ಮುಳುಗುತ್ತಿರಲು 
ಈಜಿ ಎದ್ದು ಬಂದು ಸೇರುವೆನೆ 
ಎಂಬನುಮಾನಗಳು ಮೂಡಲು 
ಬೇಕಲ್ಲವೇ ಬಾಳಿಗಾಸರೆ ಎಂದೆನಿಸಿತು ಒಮ್ಮೆ

ಆದರೂ, 
ಎಲ್ಲರೂ ಬೇಗುದಿಗೆ ಸರಿದಾಗ
ಯಾರು ಇಲ್ಲದಿರುವಾಗ
ಮನದಲ್ಲಿ ಸಂಕಟ ಮೂಡಿದಾಗ 
ಯಾರಾಸರೆ ನನಗೇಕೆಂದು 
ಮನ ದೃಢ ನಿಶ್ಚಯದಿ ಹೇಳಿತು
ಬದುಕಿನುದ್ದಕ್ಕೂ ಹೋರಾಡುವೆ, 
ಮುಂದಕೆ ನಾ ಸಾಗುವೆ, 
ಯಾರಾಸರೆಯ ಗೊಡವೆಯಿಲ್ಲದೆ!!

                                  - ಡಾ. ಗಿರಿಜಾ. ಕೆ. ಎಸ್ 

ಸಿನಿಮಾ ಪಕ್ಷಿನೋಟ - ಚಾರ್ಲಿ ಚಾಪ್ಲಿನ್‍ರವರ “ದಿ ಗ್ರೇಟ್ ಡಿಕ್ಟೇಟರ್


                     


ªÀĺÁ£ï PÀ¯Á«zÀ ªÀÄvÀÄÛ ªÀiÁ£ÀªÀvÁªÁ¢ ZÁ°ð ZÁ¦è£ï AiÀiÁjUÉ vÁ£Éà w½¢®è. Erà ¥Àæ¥ÀAZÀªÀ£Éßà £ÀqÀÄV¹zÀ ¸ÀªÁð¢üPÁj »lègï£À PÀÆægÀvÉAiÀÄ£ÀÄß AiÀiÁgÀÆ ªÀÄgÉAiÀÄ®Ä ¸ÁzsÀå«®è. EªÀj§âgÀÆ vÀªÀÄä ¨Á®åªÀ£ÀÄß §qÀvÀ£À, PËæAiÀÄð, ºÀ¹ªÀÅ, PÉÆ¼ÀPÀÄUÀ¼À ªÀÄzsÉå PÀ¼É¢zÀÝgÀÄ. DzÀgÉ M§â Erà «±ÀéªÀ£Éßà UÉ®è¨ÉÃPÉA§ ªÀĺÀvÁéPÁAPÉë ºÉÆvÀÄÛ dªÀÄð¤AiÀÄ ¸ÀªÁð¢üPÁjAiÀiÁV ¥Àæ¥ÀAZÀ AiÀÄÄzÀÞPÉÌ PÁgÀtªÁV, CªÀiÁ£À«ÃAiÀÄvÉAiÀÄ£ÀÄß, §§ðgÀvÉAiÀÄ£ÀÄß ªÉÄgÉAiÀÄÄvÁÛ£É. DzÀgÉ D E£ÉÆß§â, §qÀvÀ£ÀzÀ°è ¨ÉÃAiÀÄĪÀªÀgÀ PÀµÀÖPÁ¥ÀðtåUÀ½UÉ «ÄrAiÀÄÄvÁÛ, CªÀgÀ£ÀÄß £ÀV¸À¯Éw߸ÀÄvÁÛ£É. avÀægÀAUÀzÀ°è C¸ÁªÀiÁ£Àå PÀ¯Á«zÀ£ÁV ¨É¼ÉAiÀÄÄvÁÛ£É, CµÉÖà C®èzÉ, ¹¤ªÀiÁUÀ¼À°è PÉêÀ® ªÀÄ£ÀgÀAd£ÉAiÀÄ£ÀÄß ªÀiÁvÀæ ¤ÃqÀzÉ ªÀiÁ£À«ÃAiÀÄ ªÀiË®åUÀ¼À£ÀÄß d£ÀjUÉ vÀ®Ä¦¸ÀĪÀ°è AiÀıÀ¹éAiÀiÁUÀÄvÁÛ£É.
PÀxÁ ºÀAzÀgÀ : PÀxÉAiÀÄÄ ªÉÆzÀ® «±ÀéAiÀÄÄzÀÞ¢AzÀ DgÀA¨sÀªÁUÀÄvÀÛzÉ. AiÀÄÄzÀÞ¨sÀÆ«ÄAiÀİè dªÀÄð£ï ¸ÉʤPÀ£ÁV ZÁ¦è£ï ¸ÀAzÉñÀ¸À»vÀªÁzÀ ºÁ¸Àå ZÀlĪÀnPÉUÀ¼ÀÄ J®ègÀ£ÀÄß ¸É¼ÉAiÀÄÄvÀÛzÉ. F zÀȱÀåUÀ¼À ªÀÄÆ®PÀ AiÀÄÄzÀÞ vÀgÀ¨ÉÃw E®èzÀ, AiÀÄÄzÀÞ ªÀiÁqÀ®Ä EaÒ¸ÀzÀ d£ÀgÀ£ÀÄß AiÀiÁªÀ jÃw ¸ÀPÁðgÀUÀ¼ÀÄ §®ªÀAvÀªÁV AiÀÄÄzÀÞPÉÌ vÀ¼ÀÄîvÀÛªÉ JA§ÄzÀ£ÀÄß vÉÆÃj¹zÁÝgÉ. CµÉÖà C®èzÉ AiÀÄÄzÀÞ¨sÀÆ«ÄAiÀÄ°è §ºÀÄvÉÃPÀªÁV ¸Á«VÃqÁUÀĪÀÅzÀÄ ¸ÁªÀiÁ£Àå ¸ÉʤPÀgÉà ºÉÆgÀvÀÄ ªÉÄð£À¢üPÁjUÀ¼À®è JA§ÄzÀ£ÀÆß ¸ÀºÀ ¸ÀÄAzÀgÀªÁV awæ¹zÁÝgÉ. AiÀÄÄzÀÞ ¨sÀÆ«ÄAiÀÄ°è ±ÀįïÖ÷ì JA§ C¢üPÁjAiÀÄ£ÀÄß ZÁ¦è£ï ±ÀvÀÄæUÀ½AzÀ ¥ÁgÀÄ ªÀiÁqÀÄwÛzÁÝUÀ, EªÀgÀÄ ¥ÀAiÀÄt¸ÀÄwÛzÀÝ «ªÀiÁ£ÀªÀÅ C¥ÀWÁvÀQÌÃqÁUÀÄvÀÛzÉ. E§âgÀÆ D¸ÀàvÉæAiÀÄ£ÀÄß ¸ÉÃgÀÄvÁÛgÉ.
dªÀÄð¤UÉ AiÀÄÄzÀÞzÀ°è ¸ÉÆÃ®ÄAmÁUÀÄvÀÛzÉ. £ÀAvÀgÀ, DyðPÀ ©PÀÌlÄÖ , F jÃw §ºÀ¼ÀµÀÄÖ §zÀ¯ÁªÀuÉUÀ¼ÀÄAmÁV £Áfû ¥ÀPÀëzÀ £ÁAiÀÄPÀ£ÁV »lègï C¢üPÁgÀzÀ UÀzÀÄÝUÉAiÀÄ£ÉßÃgÀÄvÁÛ£É. PÀxÉAiÀÄ°è »lègï £À£ÀÄß »APɯï CAvÀ®Æ, dªÀÄð¤AiÀÄ£ÀÄß mÉÆªÉÄäAiÀiÁ CAvÀ®Æ PÀgÉAiÀįÁVzÉ. ¸ÉʤPÀ ªÉõÀzÀ°è PÁt¹PÉÆAqÀ ZÁ¦è£ï »lègï£À ¥ÁvÀæzÀ°è wÃgÁ ©ü£ÀߪÁV PÁtÄvÁÛgÉ. »lègï£À ¨sÁµÀt ªÀiÁqÀĪÀ zsÁnAiÀÄ£ÀÄß ªÀåAUÀå jÃwAiÀİè vÉÆÃj¸ÀĪÀ ªÀÄÆ®PÀ ZÁ¦è£ïgÀÄ ªÀÄ£À¸ÀÆgÉUÉÆ¼ÀÄîvÁÛgÉ. CzÉà ¸À¤ßªÉñÀzÀ°è »lègï£À PÉʸÀ£É߬ÄAzÀ¯Éà Erà d£À ¸ÀªÀÄÆºÀ ¸À¤ßUÉÆ¼ÀUÁzÀªÀgÀAvÉ ªÀwð¸ÀĪÀÅzÀ£ÀÄß PÁt§ºÀÄzÀÄ.
C¢üPÁgÀ zÁºÀ ©lÄÖ ¨ÉÃgÉãÀÆ ¨sÁªÀ£ÉUÀ½®èzÀ MAzÀÄ ªÀÄÈUÀ ±ÀQÛAiÀiÁzÀ »lègï£À «avÀæ fêÀ£À jÃwAiÀÄÄ F avÀæzÀ°è vÀÄA¨Á ZÉ£ÁßV ªÀÄÆr§gÀÄvÀÛzÉ. ªÀÄ£ÀĵÀågÀ fêÀPÉÌ ¸Àé®àªÀÇ ¨É¯É PÉÆqÀzÀ »lègï£À ªÀÄÄAzÉ MªÉÄä ªÀåQÛAiÉÆ§â vÁ£ÀÄ PÀAqÀÄ»rzÀ mÉÆÃ¦AiÀÄAvÀºÀ ¥ÁågÁZÀÆåmï£À PÁAiÀÄð¤ªÀðºÀuÉ vÉÆÃj¸À®Ä ºÉÆÃV ¸Á«VÃqÁUÀÄvÁÛ£É. EzÀPÉÌ »lègï ¤ÃqÀĪÀ ¥ÀæwQæAiÉÄ, “£À£Àß ¸ÀªÀÄAiÀĪÀ£ÀÄß »ÃUÉÃPÉ ªÀåxÀðªÀiÁqÀÄwÛÃj?”
EvÀÛ ¸ÀĪÀiÁgÀÄ ªÀµÀðUÀ¼À PÁ® D¸ÀàvÉæAiÀİè PÀ¼ÉzÀ ¸ÉʤPÀ ZÁ¦è£ï »A¢£ÀzɯÁè ªÀÄgÉvÀÄºÉÆÃVgÀÄvÁÛ£É. ªÀÈwÛAiÀİè PËëjPÀ£ÁVzÀÄÝ, AiÀĺÀÆ¢AiÀiÁVgÀĪÀ ªÀiÁf ¸ÉʤPÀ¤UÉ ¥Àæ¸ÀÄÛvÀ £ÀqÉAiÀÄÄwÛgÀĪÀ WÀl£ÉUÀ¼À §UÉÎ AiÀiÁªÀÅzÉà CjªÀÅ EgÀĪÀÅ¢®è. vÀ£Àß ªÀÄ£ÉAiÀÄ ªÉÄÃ¯É §gÉzÀ dÆå (JEW) CPÀëgÀUÀ¼À£ÀÄß MgɸÀÄwÛzÁÝUÀ, dªÀÄð£ï ¸ÉʤPÀgÀ zËdð£ÀåPÉÌ M¼ÀUÁUÀÄvÁÛ£É. ¥ÀPÀÌzÀ ªÀÄ£ÉAiÀÄ ºÀÄqÀÄV ºÀ£Áß¼À ¸ÀºÁAiÀÄ¢AzÀ vÀPÀëtPÉÌ vÀ¦à¹PÉÆAqÀgÀÆ, ¥ÀÅ£ÀB §AzÀ ¸ÉʤPÀgÀ UÀÄA¥ÀÅ ZÁ¦è£ïgÀ£ÀÄß PÉÆ®è®Ä ¥ÀæAiÀÄw߸ÀÄvÀÛzÉ. CzÉà ¸ÀªÀÄAiÀÄPÉÌ, dªÀÄð£ï ¸ÉÊ£ÀåzÀ°è PÀªÀiÁAqÀgï DVzÀÝ ±ÀįïÖ÷ì
ZÁ¦è£ïgÀ£ÀÄß UÀÄgÀÄw¹, gÀQë¸ÀÄvÁÛgÉ. ±ÀįïÖ÷ìgÀ ¥ÀjZÀAiÀÄ¢AzÀ ªÀiÁf ¸ÉʤPÀ¤UÉ UÀvÀªÉ¯Áè £É£À¥ÁUÀÄvÀÛzÉ. ±ÀįïÖ÷ì AiÀĺÀÆ¢UÀ¼À ¥ÀgÀ vÉÆÃj¸ÀĪÀ ªÀiÁ£À«ÃAiÀÄ PÁ¼Àf »lègïUÉ ¸Àj§gÀzÉ, ±ÀįïÖ÷ì£À£ÀÄß §A¢ü¸ÀĪÀAvÉ ºÉüÀÄvÁÛ£É. vÀ¦à¹PÉÆAqÀ ±ÀįïÖ÷ì ¸ÉʤPÀ£À ªÀÄ£ÉAiÀİè CqÀVPÉÆ¼ÀÄîvÁÛ£É. PÉÆ£ÉUÀÆ ¸ÉʤPÀgÀÄ PËëjPÀ ªÀÄvÀÄÛ ±ÀįïÖ÷ì E§âgÀ£ÀÄß §A¢ü¹  PÁ£ï¸ÀAmÉæÃµÀ£ï PÁåA¥ïUÉ zÀÆqÀÄvÁÛgÉ.
CvÀÛ UɼÉvÀ£À ¨É¼É¹PÉÆ¼Àî®Ä §gÀĪÀ E£ÉÆß§â ¸ÀªÁð¢üPÁj £É¥Éǰ¤ (ªÁ¸ÀÛªÀvÉAiÀİè El°AiÀÄ ªÀÄďɯ°¤) M¥ÀàAzÀªÉÇAzÀPÁÌV »lègï£À£ÀÄß ¨sÉÃnªÀiÁqÀÄvÁÛ£É. E§âgÀÄ ¸ÀªÁð¢üPÁjUÀ¼ÀÄ vÀªÀÄä ºÉZÀÄÑUÁjPÉAiÀÄ£ÀÄß vÉÆÃj¹PÉÆ¼Àî®Ä ºÉÆÃV £ÀUÉ¥Ál¯ÁUÀĪÀ zÀȱÀåUÀ¼ÀÄ ºÉÆmÉÖºÀÄuÁÚV¸ÀĪÀAvÉ £ÀV¸ÀÄvÀÛªÉ.
PËëjPÀ£À §AzsÀ£ÀzÀ £ÀAvÀgÀ QgÀÄPÀļÀ vÁ¼À¯ÁgÀzÉ CªÀ£À ¦æAiÀÄvÀªÉÄ ºÀ£Áß ªÀÄvÀÄÛ EvÀgÀ AiÀĺÀÆ¢UÀ¼ÀÄ, zÉñÀ ©lÄÖ D¸ÉÆÖçëZïUÉ vÉgÀ¼ÀÄvÁÛgÉ. E§âgÀÆ ¥ÀvÀæzÀ ªÀÄÆ®PÀ ¸ÀA¥ÀPÀð«j¹PÉÆ¼ÀÄîvÁÛgÉ. MAzÀÄ ¢£À PÁåA¦¤AzÀ PËëjPÀ ªÀÄvÀÄÛ ±ÀįïÖ÷ì vÀ¦à¹PÉÆ¼ÀÄîvÁÛgÉ. ªÀÄÄRzÀ°è »lègï£À£Éßà ºÉÆÃ®ÄwÛzÀÝ PÁgÀt ªÀiÁgÀĪÉõÀzÀ°èzÀÝ PËëjPÀ£À£Éßà »lègï JAzÀÄ C¢üPÁjUÀ¼ÀÄ ¨sÁ«¸ÀÄvÁÛgÉ. K£ÀÆ vÉÆÃZÀzÀ PËëjPÀ£ÀÄ ¥ÀPÀÌzÀ°èzÀÝ ±ÀįïÖ÷ì£À ¸À®ºÉAiÀÄAvÉ ªÀwð¸ÀÄvÁÛ£É. zÉÆÃt «ºÁgÀzÀ°èzÀÝ »lègï£À£ÀÄß vÀ¦à¹PÉÆAqÀ PËëjPÀ£ÉAzÀÄ §A¢ü¸ÀÄvÁÛgÉ.

D¸ÉÆÖçëZï C£ÀÄß UÉzÀÝ PÁgÀt C°è ¨sÁµÀt ªÀiÁqÀ®Ä »lègï ªÉõÀzÀ PËëjPÀ£À£ÀÄß PÀgÉvÀgÀÄvÁÛgÉ. DgÀA¨sÀzÀ°è C¥ÁgÀ d£À¸ÉÆÛêÀÄ PÀAqÀÄ ºÉzÀjzÀgÀÆ, QëÃt ¸ÀégÀ¢AzÀ DgÀA¨sÀªÁzÀ ¨sÁµÀt PÀæªÉÄÃt UÀÄqÀÄV£À gÀÆ¥À vÁ¼ÀÄvÀÛzÉ. vÀ£Àß°è£À C£ÁåAiÀÄzÀ «gÀÄzÀÞzÀ DPÉÆæÃ±ÀªÀ£ÀÄß ªÀåPÀÛ¥Àr¸ÀÄvÁÛ£É. ¢ÃWÀðªÁzÀ F ¨sÁµÀtªÉà avÀæzÀ DPÀµÀðtÂÃAiÀÄ ¨sÁUÀªÁVzÉ. ªÀiÁ£À«ÃAiÀÄvÉAiÀÄ£Éßà ¥Àæw©A©¸ÀĪÀ F ¨sÁµÀt C«¸ÀägÀtÂÃAiÀĪÁVzÉ. PÉÆ£ÉAiÀÄ°è ºÀ£Áß½UÉ, “PÁªÉÆðÃqÀUÀ¼ÀÄ ¸ÀjAiÀÄÄwÛªÉ, £ÉÆÃqÀÄ ºÀ£Áß, E£ÀÄß £ÀªÀÄUÉ zÀÄBR«®è”, JA§ ¨sÀgÀªÀ¸É ¤ÃqÀÄvÁÛ£É. C¼ÀÄwÛzÀÝ ºÀ£Áß vÀ¯ÉAiÉÄwÛ, ¸ÀAvÉÆÃµÀ¢AzÀ PÀtÚgÀ½¸ÀÄvÁÛ, ªÉÆÃqÀzÀ ªÀÄgɬÄAzÀ ºÉÆgÀ§gÀÄwÛgÀĪÀ ¸ÀÆAiÀÄð£ÉqÉUÉ ªÀÄÄR ªÀiÁqÀÄvÁÛ¼É. D ºÉÆA¨É¼ÀPÀ°è CªÀ¼À ªÀÄÄR ¨sÀ«µÀåzÀ ¨sÀgÀªÀ¸ÉAiÀÄ£ÀÄß vÉÆÃgÀÄvÀÛzÉ. C°èUÉ ¹¤ªÀiÁ ªÀÄÄVAiÀÄÄvÀÛzÉ.

vÀªÀÄä ªÉÄÃgÀÄ C©ü£ÀAiÀÄ¢AzÀ ¨ÉaÑ ©Ã½¸ÀĪÀ ZÁ¦è£ï F ¹¤ªÀiÁzÀ PÀxÉUÁgÀgÀÄ, ¤zÉðñÀPÀgÀÄ, ¤ªÀiÁð¥ÀPÀgÀÄ, ¸ÀAVÃvÀ ¤zÉðñÀPÀgÀÆ ºËzÀÄ. 1930gÀ zÀ±ÀPÀzÀ°è Erà ¥Àæ¥ÀAZÀªÉà »lègï£À PÀÆægÀvÀéªÀ£ÀÄß, AiÀĺÀÆ¢UÀ¼À ªÉÄïÁUÀÄwÛzÀÝ »A¸ÉAiÀÄ£ÀÄß PÀtÚgÀ½¹ £ÉÆÃqÀÄwÛzÁÝUÀ, ZÁ¦è£ïgÀªÀgÀÄ ¸ÀĪÀÄä£É PÀÆgÀ°®è. dªÀÄð¤AiÀįÁèUÀÄwÛzÀÝ C£ÁåAiÀĪÀ£ÀÄß RAr¸À®Ä, zËdð£ÀåPÉÌ §°AiÀiÁUÀÄwÛzÀÝ CªÀiÁAiÀÄPÀjUÉ ¸ÁAvÀé£À ¤ÃqÀ®Ä, CªÀgÀ°è fêÀ£ÉÆÃvÁìºÀ vÀÄA§®Ä ªÀÄÄAzÁUÀÄvÁÛgÉ. F avÀæªÀ£ÀÄß ªÀiÁqÀÄwÛzÁÝUÀ ZÁ¦è£ïgÀªÀjUÉ ¥Áæt ¨ÉzÀjPÉAiÀģɯßqÀدÁ¬ÄvÀÄ. CªÀgÀ ¹¤ªÀiÁ ©qÀÄUÀqÉAiÀiÁUÀzÀAvÉ ¸É£Áìgï ªÀÄAqÀ½ vÀqÉ MqÀÄØªÀÅzÁV ¨ÉzÀjPÉ MqÀدÁ¬ÄvÀÄ. DzÀgÉ ZÁ¦è£ïgÀªÀgÀÄ dUÀΰ®èè. F jÃw d£ÀvÉAiÀÄ ¸ÀAPÀµÀÖUÀ½UÉ ¸ÀàA¢¹zÀÝjAzÀ¯Éà AiÀiÁªÀ d£ÀvÉ E£ÉÆß§â »lègï ºÀÄlÖ¨ÁgÀzÀÄ JAzÀÄ §AiÀĸÀÄvÁÛgÉÆÃ, CªÀgÉà
ZÁ¦è£ï £ÀAvÀºÀªÀgÀÄ £ÀÆgÁgÀÄ ¸ÀASÉåAiÀi°è ºÀÄlÖ¯ÉAzÀÄ D²¸ÀÄvÁÛgÉ. 
-  ದೀಪಶ್ರೀ ಜೆ



ಕವನ - ಮಳೆ



ಅಬ್ಬ ! ಈ ಸಿಡಿಲು ಗುಡುಗುಗಳ ದನಿಯಿದುವೆ ಕೇಳಿ
ಒಡಲಿಂದ ಬಡಿಬಡಿದು ಮೋಡವನೆ ಸೀಳಿ
ದೂರ ದೂರದಿಂ ಹಾರಾಡಿ ಮೊರೆಯಿಡುತ
ಸಾರುವುದು ಮೊದಲಾಗಿ ಮಳೆಗರೆಯುತ||   1

ಓಡೋಡಿ ಬರುತಿರುವ ಕಪ್ಪನೆಯ ಮೋಡ
ಗೂಡಿನಲಿ ಕುಳಿತಿಹುದು ಗುಬ್ಬಚ್ಚಿ ನೋಡ 
ಗಾಳ ಹಾಕದೆ ನೊಣಕೆ ಬಾಯ್ಬಿಡದೆ
ನೆನೆನೆದು ದುಃಖಪಡುತಲಿಹ ಜೇಡ||  2

ಅಬ್ಬರಿಸಿ ಬರುತಲಿಹ ಗಾಳಿಯನು ನೋಡ
ಬೆಬ್ಬರಿಸಿ ಓಡುತಿಹ ಧೂಳಿನಲಿ ಮೋಡ
ನಾಡು ನಾಡಿಂದ ಹರಿದಾಡಿ ಬಾಗುತಿಹ
ಬೆಳೆಮರವು ಸ್ವಾಗತವ ನೀಡುವುದು ನೋಡ||  3

ಮೇಲೆ ಮೇಲಿಂದ ಬೀಳುತಿಹ ಮಳೆಯು
ಮೂಲೆ ಮೂಲೆಗಳಿಂದ ಕೇಳುತಿಹ ಗಾಳಿ
ಛಳಿಯ ಮೈನಡುಕದಲಿ ಒದರದಿಹ ಗೂಳಿ
ಹಳಿಯುವುದು ಬಯಸುವುದು ಮೇಲಾದ ಬಿಸಿಲು||   4

ದಿನದಿನಕೆ ಬಿಡದಿಹುದು ಹಿಡಿದಿಹುದು ಮಳೆಯು
ಎಂದಿಗಿದು ಮುಕ್ತಾಯಗೊಳುವುದೊ ಛಳಿಯು
ಮುದುರಿ ಕುಳಿತಿಹ ಜನಕೆ ಹುಮ್ಮಸವ ತರಲಿ
ಚದುರಿ ಜಡತೆಯು ಮನಕೆ ಮುದವು ಬರಲಿ ….  5


      - ಜಿ ಗಂಗಾಧರಯ್ಯ