Pages

ಕವನ: "ಬಡವನ ಸೇವೆ ಭಗವಂತನ ಸೇವೆ"



[ಮೇ 7 “ಗುರೂಜಿ” ಎಂದೇ ಪ್ರಸಿದ್ಧರಾದ ರವೀಂದ್ರನಾಥ ಟಾಗೋರ್‍ರವರ ಜನ್ಮದಿನ. ಈ ಸಂದರ್ಭದಲ್ಲಿ ಅವರ ಕವನ True Worship of God is to Serve Poor  ಇದರ ಅನುವಾದವನ್ನು ಪ್ರಕಟಿಸುತ್ತಿದ್ದೇವೆ]


ನೀನಾರ ಧ್ಯಾನವನು ಗೈಯುತಿಹೆ ಮೂಲೆಯೊಳು
ಮುಚ್ಚಿದಾ ಕಿಟಕಿಗಳ ಗುಡಿಯೊಳಗೆ ಒಂಟಿಯೊಳು?    
ಬಿಸುಡಲ್ಲಿ ಮಣಿಸರವ, ಗೀತೆಗಳ ಪಠನೆಯ
ಕಣ್ತೆರೆದು ನೋಡೆದುರು, ದೇವ ಗುಡಿಯೊಳಗಿಲ್ಲ||

ಗಟ್ಟಿನೆಲವನು ಬಿಡದೆ ಸತತ ಉಳುವವನಾ
ಕಲ್ಲನೊಡೆಯುತೆ ನುಣುಪುದಾಂ ಮಾಡುವನಾ;
ಮನದೊಳಗೆ ಅನವರತ ನೆಲೆಸಿರುವನು.
ಧೂಳಿನರಿವೆಯೊಳು ದೇವ ದುಡಿಯುತಿರೆ,
ಇಳಿ ಬಿಸುಟು, ನಿಲುವಂಗಿ, ಧೂಳಿನೊಳಗೆ||

ಜಗದ ಸೃಷ್ಟಿಯ ದೇವ ಬಿಡದೆ ಹೊತ್ತಿರುವಲ್ಲಿ
ಮುಕ್ತಿಯೆಂಬುದ ನೀನದೆಲ್ಲಿ ಪಡೆಯುವೆ ಮನುಜಾ?
ನಲವಿಂದ ದೇವ ತಾ ದುಡಿಯುತಿಹನು ;
ದುಡಿವರೊಳು ಅನವರತ ಬೆರೆತಿರುವನು||

ಜಪವ ಮಂತ್ರಗಳ ನಿಲಿಸಿ ಹೊರಗೆ ಬಾ;
ಧೂಪ ಪುಷ್ಪಗಳನಿರಿಸಿ ಹೊರಗೆ ಬಾ;
ಮಡಿಯರಿದರೇನಂತೆ? ಕೊಳಕಾದರೇನಂತೆ?
ನೋಡವನ ದುಡಿಮೆಯೊಳು, ನಿನ್ಹಣೆಯ ಬೆವರಿನೊಳು||

- ಜಿ ಗಂಗಾಧರಯ್ಯ

ಕಾಮೆಂಟ್‌ಗಳಿಲ್ಲ: