Pages

ಕವನ - ದೇಹ ಬಯಸಿದವರು


ರಕ್ತಸಿಕ್ತ ಹೃದಯವಿದು
ಹರಿವುದು ನಿರಂತರ.
ಜೊಲೊ ಎನುವ
ಮಳೆಯ ನಡುವೆ
ಕೋಟಿ ಜೀವ
ಒಲವಧಾರೆ.
ಖಂಡವಿದೆಕೊ ಮಾಂಸವಿದೆಕೊ
ನಿಲ್ಲದು ನಿನ್ನ
ವಿಷದ ಪಂಜು
ಮನವ ತುಂಬಿ
ತನುವ ಬಳಸಿತು
ದೇಹ ಬಯಸಿದವರಲ್ಲವೆ
ಪ್ರಾಣಿ‌ಯ ಹಸಿವು
ಪ್ರಾಣ ತಿಂದಿತು
ದೇಹ ನುಂಗಿನೀರ ಕುಡಿಯಿತು
ಕೊಂದರೇನು? 

ಹರಿಯಲಿಲ್ಲವೆ ನೀನು?
ಜಗದ ಹೃದಯ ವೀಣೆ
ಮಿಡಿದವಳಲ್ಲವೆ ?.
ಅಳುವ ಕಂದಮ್ಮಗಳ
ಪಾಲಿಗೆ ಮಡಿಲಾಗಿ
ಕಾಡು ಅಲೆವ
ಜೀವಗಳಿಗೆ ಕಣ್ಣಾಗಿ
ಬದುಕ ಹನಿಸಿದವಳೆ
ಘಾಸಿಗೊಳಿಸಿದರಲ್ಲೇ
ಅರ್ಧ ಚಲನೆಯಲ್ಲೇ
ಮಂಕು ಕವಿದ
ಬುದ್ದಿ ಮನಸು
ಕಣ್ಣ ನೀರ ಹನಿಸಿತು
ನಿಲ್ಲದ ಹನಿ
ಗೌರಿ ಗೋರಾ ಎಂದಿತು.
ನಾನು ನೀನು ನಾನು
ಜಗದ ದನಿಯೆ ಆಯಿತು.
ಕಾಯಲಿಲ್ಲ ಭ್ರಮರೆಯ,
ಅವನು, ಇವನು
ಅವಳು ಇವಳು
ಎಲ್ಲ ಭ್ರಮೆ.
ತಾಯಿ ತಂಗಿಗೆ
ಗೆಳೆಯ ಸಖಳಿಗೆ
ದೈವ ಕಟುಕರಿಗೆ
ಹೋಯಿತಯ್ಯೋ
ನೊಂದವರು ಹೆತ್ತಕೂಸು,
ಆಡಿ ಪಾಡಿ ಬೆಳೆದಕೂಸು
ಮಣ್ಣುಪಾಲೆ ಆಯಿತೊ
ಹಾಲುಹರಿಸಿ ಇಂದಿಗೆ ಸುಮ್ಮನಾಯಿತೊ


ಜಗದ ಜಾಣೆ ಜಾಣರೆ
ನಿಮಗಿದು ಕರೆ
ಜ್ವಾಲೆಯಾಗಿ
ಜರಡಿಯಾಡಿ
ಗರಡಿಹಾಕಿ
ಪಟ್ಟುಬಿಡದೆ
ಎದೆಎದೆಗಳ
ನಡುಗಿಸಿ
ಕೋಮು,ಜಾತಿ,
ಬಂಡವಾಳಶಾಹಿ ಹಿಡಿದು
ಬಡಿದು ಸುಡುವ ಶಕ್ತಿಯಾಗಿ,
ಶ್ರೀಯಲ್ಲ, ಸ್ತ್ರೀಯಾಗಿ ಮನದ ಕಿಚ್ಚು
ಕೆಚ್ಚು ನಂದದಿರಲಿ
ಗುಪ್ತಗಾಮಿನಿಯಾಗಲಿ.
ಹೋರಾಟದ ಹಾದಿಗೆ
ಜೀವಸೆಲೆಯಾಗಲಿ.

- ಸಂಧ್ಯಾ  ಪಿ ಎಸ್ 

ಕಾಮೆಂಟ್‌ಗಳಿಲ್ಲ: