Pages

ಶಾಲಾ ಡೈರಿ - ಭರವಸೆಯ ಬೆಳಕಿನಲ್ಲಿ.....


ಕನಸಿದ ವೃತ್ತಿಯೇ ಕೈಗೆಟುಕಿದಾಗಿನಿಂದ ಅದೇ ಕನಸು. ಕಲಿಸಿದ ಮಕ್ಕಳು ಶ್ರೇಷ್ಠ ನಾಯಕರಾಗದೇ ಹೋದರೂ ತನ್ನ ಮನೆಯ,ತನ್ನೂರಿನ ಖಳನಾಯಕರಾಗದಿರಲೆಂದು! ನಾನು ಕಲಿತ ಪುಣ್ಯಕೋಟಿಯ ಹಾಡುಮೇಷ್ಟ್ರು, ಮೇಡಂಗಳು ಅಕ್ಷರದ ಜೊತೆಗೆ ಅನ್ನವನ್ನೂ ತಂದುಕೊಟ್ಟ ಅಂತಃಕರಣದ ಅರಿವನ್ನೇ ನಾನು ಕಲಿಸಿದ/ಕಲಿಸುವ ಮಕ್ಕಳಿಗೂ ದಾಟಿಸುವ ಪ್ರಯತ್ನ.

  ಬೆಳೆದಂತೆಲ್ಲಾ ಮಕ್ಕಳು ಏಕೆ ಬದಲಾಗುತ್ತಾರೆಕಲಿಸಿದ ಗುರುಗಳಂತಿರಲಿಹಡೆದ ತಾಯ್ತಂದೆಯರನ್ನು ಅಲಕ್ಷ್ಯದಿಂದ ನೋಡುವಷ್ಟು ಅವರೇಕೆ ಬದಲಾಗುತ್ತಾರೆ!?

ಇಂಗ್ಲೀಷ್ ಅಕ್ಷರಗಳನ್ನು ಕಲಿಯಲೇ ಅದೆಷ್ಟು ಪೆಟ್ಟು ತಿಂದಿದ್ದನೋ ಆ ಹುಡುಗಮೊನ್ನೆ ಮೊನ್ನೆ ತನ್ನ ತಾಯಿಯನ್ನು ನೆಲಕ್ಕೆ ಕೆಡವಿ 'ಸಿಚುಯೇಷನ್ ಅರ್ಥವಾಗಲ್ವ ನಿಂಗೆ' ಅಂತ ಬಡಿಯುವಾಗ ನಾನು ಬೆದರಿಬಿಟ್ಟೆ! 'ನಿಮ್ಮ ಪಾಠ ಸ್ಕೂಲಿನಲ್ಲಿ ಮೇಡಂ' ಅಂದಾಗಅವತ್ತು ನೆಲಕ್ಕೆ ಬಿದ್ದು ಹೊರಳಾಡುವಂತೆ ಬಡಿದ್ದದ್ದು ಇವನಿಗೇನಾ?ಅನ್ನಿಸಿತು.
ಅಪ್ಪಅಮ್ಮ ಇಬ್ಬರೂ ಶಿಕ್ಷಕರೆ. ಅವರೀಗ ಕ್ಷಣ ಕ್ಷಣ ಇನ್ನೂ ಇಪ್ಪತ್ತು ದಾಟದ ಮಗನಿಗೆ ಹೆದರಿ ನಡುಗುತ್ತಾರೆ! ಅವನ ಬೇಡಿಕೆಗಳಿಗೆ ಇಲ್ಲವೆನ್ನದೆ ಪೂರೈಸುತ್ತಾರೆ. ಅದೇ ಶಾಲೆಯಲ್ಲಿ ಕಲಿತಈಗ ಎಂಜಿನಿಯರಿಂಗ್ ಕೋರ್ಸ್ ಮುಗಿಸಿರುವ ಅವರ ಮಗಳು ಅಪ್ಪಅಮ್ಮರಿಗೆ ಬೇಸರ ಕೊಡದಂತೆ ಚಂದಗೆ ಬದುಕುತ್ತಿದ್ದಾಳೆ!
ಬಿಡಲೇಅವನೇನು/ಅವಳೇನು ಕಲಿಸಿದ್ದು ಅಂತ ಉದ್ಧಟತನದ ಮಾತಾಡುವಷ್ಟು ಅಹಮಿಕೆ ಇವರಿಗೆಲ್ಲ ಎಲ್ಲಿಂದ ಬರುತ್ತದೆ!?
ಅಥವಾ ನಾವು ಕಲಿಸುವಲ್ಲಿಯೇ ದೋಷವಿದೆಯಾ?ಪುಣ್ಯಕೋಟಿಯ ಹಾಡು ಕೇಳಿ ಕಣ್ಣೀರಾಗುತ್ತಿದ್ದ ನಾವುಇವತ್ತಿನ ಮಕ್ಕಳಲ್ಲಿ ಅದನ್ನು ನಿರೀಕ್ಷಿಸಬಾರದು. ನಿಜಆದರೆ ಬದುಕಿಗೆ  ಅಗತ್ಯವಾದದ್ದನ್ನು ಪ್ರಾಮಾಣಿಕವಾಗಿ ಕಲಿಸುವ ಪ್ರಯತ್ನವನ್ನು ಅಸಂಖ್ಯ ಶಿಕ್ಷಕರು ಮಾಡುತ್ತಿದ್ದಾರೆ. ಫಲಿತಾಂಶ ಮಾತ್ರ ನಿರಾಶಾದಾಯಕ‌.

  ಉನ್ನತ ಹುದ್ದೆಗಳಲ್ಲಿದ್ದು ಎದುರು ಸಿಕ್ಕಾಗ ವಿನೀತವಾಗಿ ನಡೆದುಕೊಳ್ಳುವಸಣ್ಣ ಸಂಬಳದಲ್ಲಿಯೂ ಹೆತ್ತವರಿಗೆ ಹೊರೆಯಾಗದಂತೆ ಬದುಕುವಸಾಮಾಜಿಕವಾಗಿಯೂ ತುಡಿಯುವ ಕೆಲಮಕ್ಕಳು ತೀವ್ರ ನಿರಾಸೆಯ ಅಪಾಯದಿಂದ ತಪ್ಪಿಸುತ್ತಾರೆ. ಕಲಿತ ಒಳಿತನ್ನು ಇತರರಿಗೂ ಹಂಚಿ ಕನಸನ್ನು ಕಾಪಿಡುತ್ತಾರೆ. ಇಂತವರ ಸಂತತಿ ಸಾವಿರವಾಗಲೆಂದೇ ನನ್ನಂಥವರ ಆಶಯ.


     ~ರಂಗಮ್ಮ ಹೊದೇಕಲ್

ಕಾಮೆಂಟ್‌ಗಳಿಲ್ಲ: