Pages

ಕವನ: "ಅಪ್ಪನಿಗೊಂದು ಪತ್ರ"



ನೀನಂದು ನೀಡಿದ ಪ್ರೀತಿಯ
ನನಗೆ ಕೊಟ್ಟ ಬಾಳಜ್ಯೋತಿಯ
ಮರೆಯನೆಂದೂ ನಾನು
ಜೀವನ ನೊಗದ ಕೈ ಹಿಡಿದು
ನಮ್ಮ ಹಿತರಕ್ಷಣೆಗಾಗಿ ದುಡಿದು
ಮರೆಯಾಗಿರುವ ನೀನು
ಇಂದು ನಮಗೆ ನೆನಪು ಮಾತ್ರ

ಜೀವನದಿ ಸೋಲು ಗೆಲುವು
ಬಾಳಿನಲಿ ಸುಖದುಃಖ
ಸಮನಾಗಿ ಸ್ವೀಕರಿಸಿದ 
ಸ್ಪೂರ್ತಿಯ ಚಿಲುಮೆಯಾದ
ಸಂಕಷ್ಟಗಳನು ಹೆಗಲ ಮೇಲೆ ಹೊತ್ತಕೊಂಡ
ಖುಷಿಯನ್ನೇ ನಮಗೆ ಹೊತ್ತುತಂದ
ಕರುಣಾಮಯಿ ನೀನು
ಇಂದು ನಮಗೆ ನೆನಪು ಮಾತ್ರ

ನೀ ನಮ್ಮ ಹಿತ ಬಯಸಿದೆ
ನೋವು ನಲಿವಲ್ಲಿ ಭಾಗಿಯಾದೆ
ಬದುಕಿನ ಪಾಠ ನೀನಂದು ಕಲಿಸಿದೆ 
ಕಾಣಿರಿ ಎಲ್ಲರ ಸಮನಾಗಿ ಎಂದೆ
ಸತ್ಯದ ಪರ ಸದಾ ನಿಲ್ಲುವ
ಅನ್ಯಾಯದ ವಿರುದ್ಧ ದನಿಯೆತ್ತುವ
ದಮನಿತರಿಗೆ ನೆರವು ನೀಡುವ 
ಸಂತೋಷವನೆಲ್ಲರಿಗೂ ಹಂಚುವ
ದುಃಖವನ್ನು ನಾವೇ ಸಹಿಸುವ 
ಪಾಠಗಳನು ಮರೆಯಲು ಸಾದ್ಯವೇ?
ಅದ ಮರೆತರೆ ನಿನ್ನ ಮರೆತಂತಲ್ಲವೇ?

---  ಕೆ ಎಸ್ ಗಿರಿಜಾ 

ಕಾಮೆಂಟ್‌ಗಳಿಲ್ಲ: