Pages

ಕವನ - ಗಣೇಶನ ಹಬ್ಬದ ಸಡಗರ

 
ಪುಡಿಗಾಸಿಗಾಗಿ ಕೈಚಾಚುತಿದ್ದ 
ಪುಟ್ಟ ಪುಟ್ಟ ಮಕ್ಕಳಿಂದು,
ಗಣೇಶನನ್ನು ಕೂರಿಸಲು 
ಹಣಕ್ಕಾಗಿ ಕೈಚಾಚುತಿದ್ದರು,
ಕೆದರಿದ ಕೂದಲು, ಹರಿದ ಬಟ್ಟೆ, 
ಕೊಳಕಾದ ಪುಟ್ಟ ಕೈಗಳು, 
ಕಂಗಳಲಿ ಮಾತ್ರ ಹೊಳಪು,
ಅವರ ಹೊಳೆಯುವ ಕಣ್ಗಳಲಿ 
ದೇವರನೇ ಕಂಡ ಅನುಭವ,
ಇವರಿಗೇಕೆ ಮತ್ತೊಬ್ಬ ದೇವರ ಹುಸಾಬರಿ,
ಚಿಂದಿ ಬಟ್ಟೆಯುಟ್ಟಿದ್ದರು
ಗಣೇಶನನ್ನ ಕರೆತರುವ ಸಡಗರ,
ಹೊಟ್ಟೆ ತುಂಬಿಸಿಕೊಳ್ಳಬಹುದಾದ ಹಣದಲ್ಲಿ 
ಸಂಕಷ್ಟಹರನನ್ನ ಕೂರಿಸುವ ಆತುರ,
ಸಂಕಷ್ಟವನು ಪರಿಹರಿಸಿಕೊಳ್ಳಲು ಅಲ್ಲಾ,
ಅವನ ಕೂರಿಸಿ ತಮ್ಮ ಖುಷಿಯ ಇತರರಿಗೆ ಹಂಚಲು.........
 - ಹರ್ಷಿತ 

ಕಾಮೆಂಟ್‌ಗಳಿಲ್ಲ: