Pages

ಅನುವಾದಿತ ಕವಿತೆ - ನಿರಂಕುಶಾಧಿಕಾರಿಗೆ ಗೋರಿಬರಹ


ಪಕ್ಕಾ ಇರಬೇಕೆಲ್ಲವೂ ಅವನಿಗೆ; ಅದರದೇ ತುಡಿತ 
ಅವನು ಕಟ್ಟಿದ ಕವಿತೆ, ತಿಳಿಯುವುದು ಬಲು ಸುಲಭ
ತನ್ನ ಮುಂಗೈಯಂತೆ ತಿಳಿದಿಹನು ಮನುಷ್ಯನ ದಡ್ಡತನ
ಅವನಿಗೋ ಸೈನ್ಯ , ತುಕಡಿಗಳಲ್ಲಿ ಮಹಾ ಆಸಕ್ತಿ 
ಅವನು ನಕ್ಕರೆ, ಮಹನೀಯ ಸೆನೆಟರು ನಗುವರು
ಅವನು ಅತ್ತರೆ ಬೀದಿಯಲ್ಲಿ ಮಕ್ಕಳು ಸಾಯುವರು. 
- ಡಬ್ಲ್ಯೂ.ಎಚ್. ಆಡೆನ್
ಅನುವಾದ : ಎಸ್.ಎನ್.ಸ್ವಾಮಿ

ಕಾಮೆಂಟ್‌ಗಳಿಲ್ಲ: