Pages

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ
ಶಹೀದ್–ಎ-ಅಜಮ್ ಭಗತ್‍ಸಿಂಗ್

ಭಾಗ - 3

ಭಗತ್‍ರ ಸಮಯಸ್ಫೂರ್ತಿ
ಒಮ್ಮೆ ದಸರಾ ಮೇಳದಲ್ಲಿ “ನನ್ನ ದೇಶದ ಜನಗಳೇ ಎದ್ದೇಳಿ!” ಎಂಬ ಕರಪತ್ರ ಹಂಚಲು ಇತರರೊಂದಿಗೆ ಭಗತ್ ಹೋಗಿದ್ದರು. ಕರಪತ್ರ ಹಂಚುತ್ತಿದ್ದಾಗ ಇಬ್ಬರು ಪೆÇೀಲೀಸರಿಗೆ ಸಿಕ್ಕಿಬಿದ್ದರು. ಭಗತ್ ಒಂದು ಉಪಾಯ ಮಾಡಿದರು ಪೆÇೀಲೀಸರ ಬಳಿ ಬಂದು “ಅಲ್ಲಿ ಯಾರೋ ಕರಪತ್ರ ಹಂಚುತ್ತಿದ್ದಾರೆ” ಎಂದರು. ಇಬ್ಬರು ಪೆÇೀಲೀಸರನ್ನು ಬಿಟ್ಟು ಉಳಿದವರೆಲ್ಲಾ ಆ ಕಡೆ ಹೋದರು. ಆ ಇಬ್ಬರನ್ನು ಕೆಳಗೆ ಬೀಳಿಸಿ ತಮ್ಮ ಸಹಚರರನ್ನು ಬಿಡಿಸಿಕೊಂಡು ಹೋದರು. ಇದು ಅವರ ಸಮಯಸ್ಫೂರ್ತಿ, ಚಾಕಚಕ್ಯತೆ ಮತ್ತು ಸಾಹಸಕ್ಕೆ ಸಾಕ್ಷಿ.

ನೌಜವಾನ್ ಭಾರತ್ ಸಭಾದ ರಚನೆ
ಕಾನ್‍ಪುರದಲ್ಲಿ0iÉುೀ ಭಗತ್ ಪರಿಪೂರ್ಣ ಕ್ರಾಂತಿಕಾರಿಯಾದದ್ದು. ಅವರೊಂದು ಹೊಸ ಹೆಸರೊಂದನ್ನು ಸಹ ಪಡೆದರು - ‘ಬಲವಂತ್’ ಎಂದು. ಬಹಳಷ್ಟು ಕ್ರಾಂತಿಕಾರಿ ಸಂಘಟನೆಗಳ ಜೊತೆ ಸಂಬಂಧವನ್ನು ಬೆಳೆಸಿಕೊಂಡರು. ಆಜಾದ್‍ರನ್ನು ಭೇಟಿಯಾದದ್ದು ಇಲ್ಲಿ0iÉುೀ. ಜೊತೆಗೆ ಜೆ.ಸಿ. ಚಟರ್ಜಿ, ವಿಜ0iÀiïಕುಮಾರ್ ಸಿನ್ಹಾ ಮುಂತಾದವರ ಪರಿಚಯವೂ ಆಯಿತು. ಇವರೆಲ್ಲರ ಸ್ನೇಹದಿಂದ ಅವರು ‘ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿ0iÉುೀಷನ್’ (ಎಚ್‍ಆರ್‍ಎ) ಬಗ್ಗೆ ಆಕರ್ಷಿತರಾದರು.
ಭಗತ್ ವಿದ್ಯಾರ್ಥಿ-ಯುವಜನರನ್ನು ಸೇರಿಸಿ ಸಂಘಟನೆಯೊಂದನ್ನು ಕಟ್ಟಲು ತೀರ್ಮಾನಿಸಿದರು. ಆ ಕಾರ್ಯಕ್ಕಾಗಿ0iÉುೀ ದೇಶಪ್ರೇಮಿ ವಿದ್ಯಾರ್ಥಿ-ಯುವಜನರನ್ನು ಭೇಟಿಮಾಡಿದರು. 1925ರಲ್ಲಿ ನೌಜವಾನ್ ಭಾರತ್ ಸಭಾದ ರಚನೆ ಮಾಡುವಾಗ ಭಗತ್‍ಸಿಂಗ್‍ರು ಈ ರೀತಿ ಹೇಳಿದ್ದರು. “ಪ್ರಪಂಚದೆಲ್ಲೆಡೆ ಸ್ವಾತಂತ್ರ್ಯಕ್ಕಾಗಿನ ಸಮರದಲ್ಲಿ ವಿದ್ಯಾರ್ಥಿಗಳು ಮುಂಚೂಣೆಯಲ್ಲಿದ್ದು ಬಲಿದಾನ ಮಾಡಿದ್ದಾರೆ. ನಮ್ಮ ದೇಶದ ಈ ಪರಿಸ್ಥಿತಿಯಲ್ಲಿ ಭಾರತೀಯ ಯುವಕರು ಅದೇ ದೃಢಸಂಕಲ್ಪವನ್ನು ಪ್ರದರ್ಶಿಸಲು ಹಿಂತೆಗೆಯುತ್ತಾರೆ0iÉುೀ? ಯಾವ ಕ್ರಾಂತಿ ಜನತೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟು, ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ಯುವಜನರು ದೇಶದ ಮೂಲೆಮೂಲೆಗೂ ಒಯ್ಯಬೇಕು, ಮಿಲಿಯಾಂತರ ಜನತೆಗೆ, ಕೈಗಾರಿಕೆ, ಕೊಳೆಗೇರಿ, ಹಳ್ಳಿಯ ಗುಡಿಸಲುಗಳಿಗೆ ತಲುಪಿಸಬೇಕು.”

ಭಗವತೀಚರಣ್‍ರವರಿಂದ ಬರೆಯಲ್ಪಟ್ಟ ನೌಜವಾನ್ ಭಾರತ್ ಸಭಾದ ಪ್ರಣಾಳಿಕೆಯಲ್ಲಿ ‘ಯುವಕರು ಮುಕ್ತವಾಗಿ, ಶಾಂತವಾಗಿ ಮತ್ತು ತಾಳ್ಮೆಯಿಂದ ಯೋಚಿಸಬೇಕೆಂದು ಮತ್ತು ತಮ್ಮ ಜೀವನದ ಏಕೈಕ ಗುರಿ ಭಾರತದ ಸ್ವಾತಂತ್ರ್ಯವೆಂದು ಭಾವಿಸಬೇಕೆಂದು’ ಬರೆಯಲಾಗಿತ್ತು. ಅಂತೆ0iÉುೀ ‘ಹಿಂದೂ-ಮುಸ್ಲಿಂ ಎಂದು ಹೊಡೆದಾಡುವುದು ತಪ್ಪು’ ಎಂದು ಹೇಳಲಾಗಿತ್ತು. ಪ್ರತಿಯೋರ್ವ ಸದಸ್ಯ ಸಹ ಸಮುದಾಯದ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ0iÉುೀ ಮುಖ್ಯವೆಂದು ಪ್ರಮಾಣ ಮಾಡಿ ಸಹಿ ಹಾಕಬೇಕಿತ್ತು. ಸಂಘಟನೆ ಅಸ್ತಿತ್ವಕ್ಕೆ ಬಂದ ತಕ್ಷಣವೇ ಸದಸ್ಯರು ಸ್ವಾತಂತ್ರ್ಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು, ಅವರಲ್ಲಿ ಹೋರಾಟದ ಉತ್ಸಾಹವನ್ನು ತುಂಬಲು ಚಟುವಟಿಕೆಗಳನ್ನು ಆರಂಭಿಸಿದರು.

ಪರಿಪಕ್ವ ಕ್ರಾಂತಿಕಾರಿ
ಕಾನ್ಪುರದಿಂದ ತಮ್ಮ ಕುಟುಂಬದವರನ್ನು ಭೇಟಿಯಾಗಲು ಹಿಂತಿರುಗಿ ಬಂದ ಭಗತ್‍ರು ಪರಿಪಕ್ವ ಕ್ರಾಂತಿಕಾರಿಯಾಗಿದ್ದರು. 1925ರಲ್ಲಿ ಅವರು ರೈತ ಜಾಥಾಕ್ಕೆ ಸಂಬಂಧಿಸಿದ ಏರ್ಪಾಡುಗಳನ್ನು ಮಾಡಿದ್ದು ಅದಕ್ಕೆ ಸಾಕ್ಷಿಯಾಗಿತ್ತು. ಆಗ ಪಂಜಾಬಿನ ಜನ ದೇವಾಲಯಗಳಿಗೆ ನೀಡಿದ್ದ ಅಪಾರ ಹಣ ದುರ್ವಿನಿಯೋಗ ಆಗುತ್ತಿದೆ ಎಂದು ತಿಳಿದು ರೊಚ್ಚಿಗೆದ್ದರು. ಆ ಹಣವನ್ನು ರಾಷ್ಟ ನಿರ್ಮಾಣ ಕಾರ್ಯಗಳಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಅವರ ಒತ್ತಾಯವಾಗಿತ್ತು. ಆ ದೃಷ್ಟಿಯಿಂದ ಗುರುನಾನಕ್‍ರ ಜನ್ಮ ಸ್ಥಳಕ್ಕೆ ಜಾಥಾಗಳಲ್ಲಿ ಹೊರಡಲು ಸಜ್ಜಾದರು. ಒಂದು ಜಾಥಾ ಭಗತ್‍ರ ಹಳ್ಳಿಯ ಮುಖಾಂತರ ಹೋಗುವುದಿತ್ತು. ಅದಕ್ಕೆ ಆಹಾರ-ವಸತಿ ಇತ್ಯಾದಿ ಏರ್ಪಾಡು ಮಾಡಲು ತಂದೆ ಭಗತ್‍ರಿಗೆ ಹೇಳಿದರು. ಪೆÇಲೀಸರಿಗೆ, ಸ್ಥಳೀ0iÀi ಬ್ರಿಟಿಷ್-ಬೆಂಬಲಿಗ ಜಮೀನುದಾರರಿಗೆ ಸೆಡ್ಡು ಹೊಡೆದು ಭಗತ್ ಆ ಕಾರ್ಯ ಪೂರೈಸಿದರು. ಆ ಜಾಥಾದ ಜನತೆಯ ಮುಂದೆ ತಮ್ಮ ಮೊದಲ ರಾಜಕೀಯ ಭಾಷಣ ಮಾಡಿದರು. ಯಾವುದೋ ನೆಪ ಒಡ್ಡಿ ಪೆÇಲೀಸರು ಬಂಧನದ ವಾರೆಂಟ್ ಹಿಡಿದು ಬರುವ ಮುನ್ನವೇ ಭಗತ್ ಅಲ್ಲಿಂದ ತಪ್ಪಿಸಿಕೊಂಡರು. ಮುಂದೆ ದೆಹಲಿಯಲ್ಲಿ ‘ವೀರ್ ಅರ್ಜುನ್’ ಪತ್ರಿಕೆಯ ವರದಿಗಾರರಾದರು. 

ಪ್ರಥಮ ಬಂಧನ
ಒಮ್ಮೆ 1927ರ ಮೇ ತಿಂಗಳಿನಲ್ಲಿ ಭಗತ್‍ಸಿಂಗ್‍ರವರು ಲಾಹೋರಿನ ತೋಟವೊಂದರಲ್ಲಿ ನಡೆಯುತ್ತಿದ್ದಾಗ ಅವರನ್ನು ಬಂಧಿಸಲಾಯಿತು. ಅಲ್ಲಿನ ರೈಲ್ವೆ ಪೆÇಲೀಸ್ ಠಾಣೆಗೆ ಕರೆದೊಯ್ದು ಯಾವುದೇ ವಿಚಾರಣೆಯಿಲ್ಲದೆ ಒಂದು ತಿಂಗಳು ಬಂಧನದಲ್ಲಿಡಲಾಯಿತು. ನಂತರ ಪೆÇಲೀಸರು “ದಸರಾ ಉತ್ಸವದ ಸಮಯದಲ್ಲಿ ಜನಗಳ ಮೇಲೆ ಬಾಂಬ್ ಎಸೆದಿದ್ದೀಯಾ” ಎಂದು ಆರೋಪಿಸಿದರು. “ಸರ್ಕಾರದ ಸಾಕ್ಷಿದಾರನಾದರೆ ಕ್ಷಮಿಸಿಬಿಡುತ್ತೇವೆ,” ಎಂದು ಹೇಳಿದರು. ಭಗತ್‍ಸಿಂಗ್ ನಕ್ಕುಬಿಟ್ಟರು. “ತಮ್ಮದೇ ದೇಶದ ಜನರ ಮೇಲೆ ಬಾಂಬ್ ಹಾಕುವಂತವರು ತಾವಲ್ಲ,” ಎಂದು ಹೇಳಿದರು. ಸರ್ಕಾರದ ಪರ ಸಾಕ್ಷಿದಾರರಾಗಲಿಲ್ಲವೆಂದು ಕೋಪಗೊಂಡ ಪೆÇಲೀಸರು ಅವರ ಮೇಲೆ ದಸರಾ ಬಾಂಬ್ ಆಪಾದನೆಯೊಂದಿಗೆ ಕಾಕೋರಿ ದರೋಡೆಯ ಕೇಸ್‍ನಲ್ಲೂ ಇವರ ಹೆಸರನ್ನು ಸೇರಿಸಿದರು. ಯಾವುದೇ ಸಾಕ್ಷಾಧಾರವಿಲ್ಲದಿದ್ದರೂ, ಪೆÇಲೀಸರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದು ಭಗತ್‍ಸಿಂಗ್‍ರಿಗೆ ಅರ್ಥವಾಯಿತು. ಸಾಕ್ಷಾಧಾರವಿಲ್ಲದಿದ್ದರೂ ಜಡ್ಜ್, ಜಾಮೀನು ಪಡೆಯಲು 50,000 ರೂಗಳನ್ನು ವಿಧಿಸಿದರು. ಆ ಜಾಮೀನಿನ ಹಣವನ್ನು ಅವರ ತಂದೆಯ ಸ್ನೇಹಿತರು ಕಟ್ಟಿದರು. ಆದರೆ ನಂತರ ಜನರ ಒತ್ತಡದಿಂದ, ಯಾವುದೇ ಸಾಕ್ಷಾಧಾರಗಳಿಲ್ಲದ್ದರಿಂದ ಅದನ್ನು ಹಿಂದೆ ಪಡೆಯಲಾಯಿತು. ಜೈಲಿನಲ್ಲಿದ್ದ ಅಲ್ಪಕಾಲದಲ್ಲಿ0iÉುೀ ಅಲ್ಲಿ ರಾಜಕೀಯ ಖೈದಿಗಳನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದನ್ನು ವಿರೋಧಿಸಿ ಭಗತ್ ಪ್ರತಿಭಟಿಸಿದರು.

ಎಚ್ ಎಸ್ ಆರ್ ಎ ಯ ರಚನೆ
ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿ0iÉುೀಷನ್‍ನ ರಾಮ್‍ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ, ರಾಜೇಂದ್ರ ಲಾಹಿರಿ, ಸೋಹನ್‍ಸಿಂಗ್‍ರನ್ನು ಕಾಕೋರಿ ವಿಚಾರಣೆಯಲ್ಲಿ ಗಲ್ಲಿಗೇರಿಸಲಾಗಿತ್ತು ಮತ್ತು ಇತರರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಆಜಾದ್ ಮಾತ್ರ ತಪ್ಪಿಸಿಕೊಂಡಿದ್ದರು. ಹಾಗಾಗಿ ಸಂಘಟನೆ ಬಲವಾಗಿರಲಿಲ್ಲ. ಆ ಸಂಘಟನೆಗೆ ಹೊಸ ರೂಪವನ್ನು ಕೊಡಲು ಭಗತ್ ಮತ್ತು ಅವರ ಸಂಗಾತಿಗಳು ನಿರ್ಧರಿಸಿದರು. ದೆಹಲಿಯ ಫಿರೋಜ್‍ಶಾಹ್ ಕೋಟ್ಲಾ ಮೈದಾನದಲ್ಲಿ  1928ರ ಸೆಪ್ಟೆಂಬರ್ 8-9ರಂದು ಸಭೆಯನ್ನು ಸಂಘಟಿಸಲಾಯಿತು. ಇಲ್ಲಿ ನಡೆದ ಸಭೆಗೆ ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮುಂತಾದ ಭಾಗಗಳಿಂದ ಬಂದಿದ್ದ ಕ್ರಾಂತಿಕಾರಿಗಳೆಲ್ಲಾ ಸೇರಿ ಎಚ್.ಆರ್.ಎ.ಗೆ ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿ0iÉುೀಷನ್ ಎಂದು ಪುನರ್-ನಾಮಕರಣ ಮಾಡಿದರು. üಕ್ರಾಂತಿಕಾರಿಗಳಲ್ಲಿ ಸಮಾಜವಾದದ ಬಗ್ಗೆ ಬೆಳೆದ ಒಲವನ್ನು ತೋರಿಸುತ್ತದೆ. ಸಂಘಟನೆಯ ಉದ್ದೇಶದ ಬಗ್ಗೆ ಸಭೆಯಲ್ಲಿ ಆಜಾದರು ಈ ರೀತಿ ನುಡಿದರು- “ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯುಂಟಾಗಿದೆ. ಇಡೀ ರಾಷ್ಟ್ರದಲ್ಲಿ ಬಿಗಡಾಯಿಸಿದ ವಾತಾವರಣವಿದೆ. ಏನಾದರೊಂದು ಕೃತ್ಯದಲ್ಲಿ ತೊಡಗಲು ಸಮಯ ಪಕ್ವವಾಗಿದೆ. ಕಾಂಗ್ರೆಸ್ ಪಕ್ಷದ ನೀತಿಯಿಂದ ರಾಷ್ಟವು ಸ್ವತಂತ್ರವಾಗಲಾರದು. ದಿನಬೆಳಗಾದರೆ ಒಂದಲ್ಲ ಒಂದು ಒಪ್ಪಂದ ಮಾಡಿಕೊಳ್ಳುವುದೇ ಅವರ ಪರಿಪಾಠವಾಗಿದೆ. ತೋಳು ಮಡಿಸಿ ಸಮರಕ್ಕಿಳಿಯಲು ಯುವಕರು ಇಂದು ಸನ್ನದ್ಧರಾಗಬೇಕು. ನಮ್ಮ ಸಂಘಟನೆಯನ್ನು ಈ ದೃಷ್ಟಿಯಿಂದ ಮಿಲಿಟರಿಯ ಪದ್ಧತಿಯಲ್ಲಿ ಬೆಳಸಬೇಕಾಗುತ್ತದೆ.”

ಕಾಂಗ್ರೆಸ್‍ನ ಬಗ್ಗೆ ಈ ಯುವಜನ ಎಷ್ಟು ಬೇಸತ್ತಿದ್ದಾರೆಂಬುದಕ್ಕೆ ಇದು ಸಾಕ್ಷಿಯಾಗಿದೆ.  ಬ್ರಿಟಿಷರ ವಿರುದ್ಧ ಯುದ್ಧ ಸಾರುವುದರಿಂದ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಳ್ಳಬಹುದು ಎಂಬುದು ಎಲ್ಲರ ಅಚಲವಾದ ನಂಬಿಕೆಯಾಗಿ ಬಿಟ್ಟಿತ್ತು. ರಷ್ಯಾದಲ್ಲಿ 1917ರಲ್ಲಿ ಲೆನಿನ್‍ರವರ ನೇತೃತ್ವದಲ್ಲಿ ನಡೆದಿದ್ದ ಕಾರ್ಮಿಕ ವರ್ಗದ ಕ್ರಾಂತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದ ಭಗತ್‍ಸಿಂಗ್ ಆ ಬಗ್ಗೆ ಸಾಕಷ್ಟು ಓದಿದ್ದರು. ಕಮ್ಯುನಿಸಂ ನೇತಾರರಾದ ಕಾರ್ಲ್‍ಮಾರ್ಕ್ಸ್ ಮತ್ತು ಲೆನಿನ್‍ರವರ ಬರಹಗಳನ್ನು ಅಧ್ಯಯನ ಮಾಡಿದ್ದರು. “ಸಾಮಾನ್ಯ ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಕೂಲಿಗಾರರಿಗೆ ಸ್ವಾತಂತ್ರ್ಯ ಬರದಿದ್ದರೆ ಏನು ಉಪಯೋಗ?  ಬ್ರಿಟಿಷರ ಆಳ್ವಿಕೆಯ ಬದಲಿಗೆ ಭಾರತೀಯರೇ ದಬ್ಬಾಳಿಕೆ ನಡೆಸಿದರೆ ಅದು ಸ್ವಾತಂತ್ರ್ಯವಾಗುವುದಿಲ್ಲ. ಆದ್ದರಿಂದ ನಿಜವಾದ ಕ್ರಾಂತಿ ಅಂದರೆ ಅಧಿಕಾರ ಕಾರ್ಮಿಕ–ರೈತ ವರ್ಗಕ್ಕೆ ಸಿಗಬೇಕು. ಹಸಿವು, ಬಡತನ, ಅನಕ್ಷರತೆ ಕಣ್ಮರೆಯಾಗಬೇಕು,” ಎಂಬುದು ಅವರ ನಿಲುವಾಗಿತ್ತು.  ಈ ಬಗ್ಗೆ ಮಾರ್ಕ್ಸ್‍ರವರ ನಿಲುವು ಭಗತ್‍ಸಿಂಗ್‍ರವರಿಗೆ ಸರಿ0iÉುನಿಸಿತ್ತು. “ಸ್ವಾತಂತ್ರ್ಯವನ್ನು ಕೇವಲ ಪರಕೀಯ ಬ್ರಿಟಿಷರಿಂದ ಮಾತ್ರವಲ್ಲದೆ ಸ್ಥಳೀಯ ಬಂಡವಾಳಗಾರರು-ಜಮೀನುದಾರರಿಂದಲೂ ಪಡೆಯಬೇಕು. ಅದಕ್ಕಾಗಿ ಕ್ರಾಂತಿ ಅಂದರೆ, ಮೂಲಭೂತ ಬದಲಾವಣೆ ಅನಿವಾರ್ಯ,” ಎಂಬ ಸಿದ್ಧಾಂತಕ್ಕೆ ಬದ್ಧರಾದರು. ಆದ್ದರಿಂದಲೇ ಎಚ್.ಎಸ್.ಆರ್.ಎ ಮೂಲಕ ಬ್ರಿಟಿಷರಲ್ಲಿ ಭಯವನ್ನು ಹುಟ್ಟಿಸಲೆತ್ನಿಸುತ್ತಿದ್ದರೆ, ನೌಜವಾನ್ ಭಾರತ್ ಸಭಾದ ಮೂಲಕ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಸಂಘಟಿಸಿ ಚಳುವಳಿಗಳನ್ನು ಬೆಳೆಸುತ್ತಿದ್ದರು.

ಆಜಾದ್‍ರೊಂದಿಗಿನ ಬಾಂಧವ್ಯ
ಈ ಹೋರಾಟದಲ್ಲಿ0iÉುೀ ಭಗತ್‍ಸಿಂಗ್ ಮತ್ತು ಆಜಾದರ ನಡುವೆ ನಿಕಟವಾದ ಬಾಂಧವ್ಯ ಬೆಳೆಯಿತು. ಕ್ರಾಂತಿಕಾರಿ ಚಳುವಳಿಯಲ್ಲಿ ಆeóÁದ್ ಭಗತ್‍ರಿಗಿಂತ ಹೆಚ್ಚು ಅನುಭವ ಹೊಂದಿದ್ದರೂ, ಆeóÁದ್‍ರಿಗೆ ಭಗತ್‍ರ ವಿಚಾರಶೀಲತೆಯ ಬಗ್ಗೆ ಅಪಾರವಾದ ಗೌರವವಿತ್ತು. ಆಜಾದ್ ಮತ್ತು ಭಗತ್‍ರ ನಡುವೆ ವಯಸ್ಸಿನ ಅಂತರ ಹೆಚ್ಚಿರದಿದ್ದರೂ, ಆeóÁದ್ ಒಂದು ರೀತಿಯಲ್ಲಿ ಭಗತ್‍ಸಿಂಗ್‍ರಿಗೆ ತಂದೆಯಂತಿದ್ದರು. ಇಬ್ಬರೂ ಕ್ರಾಂತಿಕಾರಿ ಚಳುವಳಿಗೆ ರೂಪು ನೀಡಲು ಒಟ್ಟಿಗೆ ಶ್ರಮಿಸಿದ್ದರು. ಸ್ವತಂತ್ರ ಭಾರತದ ಕನಸನ್ನು ಕಂಡಿದ್ದರು. ಭಾರತವು ಸಮಾಜವಾದಿ ವ್ಯವಸ್ಥೆಯಾಗಿ ಇತರೆ ದಾಸ್ಯ ರಾಷ್ಟಗಳ ವಿಮೋಚನೆಗಾಗಿ ಶ್ರಮಿಸಿ, ಜಗತ್ತಿನಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ತರುವ ಕನಸನ್ನು ಕಂಡಿದ್ದರು. ಇಬ್ಬರೂ ಅಸಾಮಾನ್ಯ ಕ್ರಾಂತಿಕಾರಿಗಳಾಗಿದ್ದರು.
“ಪಂಜಾಬಿನ ನೌಜವಾನ್ ಭಾರತ್ ಸಭಾ”
1928ರ ಏಪ್ರಿಲ್ 11ರಿಂದ 13ರವರೆಗೆ ಯುವಜನ ಸಮ್ಮೇಳನ ನಡೆಸಲು “ಕೀರ್ತಿ” ಪತ್ರಿಕೆ ಸಂಪಾದಕರಾದ ಸೋಹನ್‍ಸಿಂಗ್ ಜೋಶ್ ನಿರ್ಧರಿಸಿದ್ದರು. ಭಗತ್‍ರು ಅವರನ್ನು ಭೇಟಿ ಮಾಡಿ, ತಾವೂ ಅದರಲ್ಲಿ ಭಾಗಿಯಾಗುವುದಾಗಿ ಹೇಳಿದರು. ಭಗತ್‍ರ ಸಲಹೆಯನ್ನು ಸ್ವೀಕರಿಸಿದ ಸಭೆ ಹೊಸ ಸಂಘಟನೆಗೆ “ಪಂಜಾಬಿನ ನೌಜವಾನ್ ಭಾರತ್ ಸಭಾ” ಎಂದು ಕರೆಯಬೇಕೆಂದು ತೀರ್ಮಾನಿಸಿತು. ಸೈಮನ್ ಆಯೋಗವನ್ನು ವಿರೋಧಿಸುವ, ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಂಡಿತು. ಶ್ರಮಿಕರ ಮತ್ತು ರೈತರ ನಾಯಕತ್ವದಲ್ಲಿ ಸಂಪೂರ್ಣವಾಗಿ ಸ್ವತಂತ್ರ ಸರ್ಕಾರವನ್ನು ಸ್ಥಾಪಿಸುವುದು ಸಭಾದ ಆದ್ಯ ಕರ್ತವ್ಯವೆಂದು ಘೋಷಿಸಿತು. ಅಲ್ಲಿಯೂ ಸಹ ಭಗತ್‍ರ ತಂಡ ಮತ್ತು ‘ಕೀರ್ತಿ’ ತಂಡ, “ಧಾರ್ಮಿಕ ಮತ್ತು ಮತೀಯ ಸಂಘಟನೆಗಳಲ್ಲಿ ಐಕ್ಯಗೊಂಡ ಯುವಕರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಬಾರದೆಂದು ಮತ್ತು ಧರ್ಮ ಖಾಸಗಿ ವಿಷಯ, ಆದರೆ ಮತೀಯ ಚೌಕಟ್ಟಿನಲ್ಲಿ ಹೊರಬರುವ ದುಷ್ಟ ಪ್ರವೃತ್ತಿಗಳನ್ನು ಸರ್ವಥಾ ಎದುರಿಸುವುದು ನಮ್ಮ ಕರ್ತವ್ಯ,” ಎಂದು ತೀರ್ಮಾನಿಸಿತು. 

- ಸುಧಾ ಜಿ
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)

ಕಾಮೆಂಟ್‌ಗಳಿಲ್ಲ: