Pages

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 4

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

‘ಸೈಮನ್ ಹಿಂತಿರುಗು’ ಚಳುವಳಿ
ಭಾರತ ಇನ್ನಷ್ಟು ಸಂವಿಧಾನಾತ್ಮಕ ಸುಧಾರಣೆಗಳನ್ನು ಪಡೆಯಲು ಎಷ್ಟರ ಮಟ್ಟಿಗೆ ಅರ್ಹವಾಗಿದೆ ಎಂಬುದನ್ನು ತಿಳಿದುಬರಲು, 1928ರಲ್ಲಿ ಬ್ರಿಟಿಷ್ ಸಂಸತ್ತು, ಸರ್ ಜಾನ್ ಸೈಮನ್‍ರ ನೇತೃತ್ವದಲ್ಲಿ ಏಳು ಜನರ ಆಯೋಗವನ್ನು ರಚಿಸಿತು. 1919ರ ಭಾರತೀಯ ಕೌನ್ಸಿಲ್ ಕಾಯಿದೆಯಡಿಯಲ್ಲಿ (ಮಾಂಟೆಗೊ-ಚೆರ್ಮ್ಸ್‍ಫರ್ಡ್ ಸುಧಾರಣೆ), ಈ ಅಂಶವನ್ನು ಸೇರಿಸಲಾಗಿತ್ತು. ಈಗಾಗಲೇ ಕಾಂಗ್ರೆಸ್ಸ್ 1929ರ ಡಿಸೆಂಬರ್ 31ರ ಒಳಗೆ ಡೊಮಿನಿಯನ್ ಸ್ಟೇಟಸ್ (ಬ್ರಿಟಿಷ್ ಅಧೀನತೆಯಲ್ಲಿ0iÉುೀ ಭಾರತೀಯರು ಸರ್ಕಾರವನ್ನು ನಡೆಸುವುದು) ನೀಡದಿದ್ದರೆ, ಸಂಪೂರ್ಣ ಸ್ವಾತಂತ್ರ್ಯಕಾಗಿ ಚಳುವಳಿ ಆರಂಭಿಸಬೇಕಾಗುತ್ತದೆ ಎಂದು ಹೇಳಿತ್ತು. ಇಷ್ಟಾದರೂ ಬ್ರಿಟಿಷರ ಈ ನಡೆ ಗಾಂಧೀಜಿಯವರಿಗೆ ಆಘಾತವನ್ನುಂಟುಮಾಡಿತ್ತು. ಅವರು ಆಯೋಗವನ್ನು ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಂದು ರೂಪದಲ್ಲಿಯೂ ವಿರೋಧಿಸಬೇಕೆಂದು ದೇಶದ ಜನತೆಗೆ ಕರೆ ನೀಡಿದರು.

ಭಗತ್‍ಸಿಂಗ್ ಮತ್ತವರ ಸಂಗಾತಿಗಳು ಡೊಮಿನಿಯನ್ ಸ್ಟೇಟಸ್‍ಗೆ ವಿರುದ್ಧವಾಗಿದ್ದರು. ಅವರ ಬೇಡಿಕೆ ಸಂಪೂರ್ಣ ಸ್ವಾತಂತ್ರ್ಯವಾಗಿತ್ತು. ಆದರೂ ಸಹ ಅವರು ಈ ಚಳುವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಜನತೆಯನ್ನು ಬಡಿದೆಬ್ಬಿಸಲು  ತೆಗೆದುಕೊಳ್ಳುವ ಯಾವುದೇ ಕ್ರಮ ಅವಶ್ಯಕ ಎಂದು ನಂಬಿದ್ದರು. ಕ್ರಾಂತಿಯ ಯಶಸ್ಸಿಗೆ ಕ್ರಿ0iÉು ಅವಶ್ಯಕ ಎಂದು ನಂಬಿದ್ದರವರು. ಎಲ್ಲಾ ರೀತಿಯಲ್ಲೂ ಸೈಮನ್ ಆಯೋಗವನ್ನು ಪ್ರತಿಭಟಿಸುವ ನಿರ್ಧಾರ ಕೈಗೊಂಡು ಚಳುವಳಿಗಳನ್ನು ಸಂಘಟಿಸಲಾರಂಭಿಸಿದರು.

1928ರ ಅಕ್ಟೋಬರ್ 3ರಂದು ಸುಮಾರು 5000ಕ್ಕೂ ಹೆಚ್ಚು ಪ್ರತಿಭಟನಾಕಾರರು ಲಾಹೋರಿನ ರೈಲ್ವೆ ಸ್ಟೇಷನ್ ಬಳಿ ಸೇರಿದ್ದರು. “ಸೈಮನ್ ಹಿಂತಿರುಗು” ಎನ್ನುವುದು ಅವರ ಘೋಷಣೆಯಾಗಿತ್ತು. ಈ ಪ್ರತಿಭಟನೆಯ ನೇತೃತ್ವವನ್ನು ‘ಪಂಜಾಬಿನ ಸಿಂಹ’ವೆಂದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ್‍ರಾ0iÀiïರವರು ವಹಿಸಿದ್ದರು. ಆಯೋಗದ ಸದಸ್ಯರು ರೈಲ್ವೆ ಸ್ಟೇಷನ್ನಿನಲ್ಲಿ ಇಳಿಯುತ್ತಿದ್ದಂತೆ0iÉುೀ ಜನತೆ “ಇಂಕ್ವಿಲಾಬ್ ಜಿಂದಾಬಾದ್” ಎನ್ನುವ ಘೋಷಣೆಯನ್ನು ಎತ್ತಿದರು. ಮೊಟ್ಟ ಮೊದಲ ಬಾರಿಗೆ “ಕ್ರಾಂತಿ ಚಿರಾಯುವಾಗಲಿ” ಎನ್ನುವ ಘೋಷಣೆಯನ್ನು ಕ್ರಾಂತಿಕಾರಿಗಳಲ್ಲದೆ ಸಾಮಾನ್ಯ ಜನತೆ ಸಹ ಕೂಗುವಂತಾಗಿತ್ತು. ಈ ಘೋಷಣೆಯನ್ನು ಜನಪ್ರಿಯಗೊಳಿಸಿದವರು ಭಗತ್‍ಸಿಂಗ್. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಅರ್ಥವನ್ನು ನೀಡಿತ್ತು ಈ ಘೋಷಣೆ.

ಪೆÇಲೀಸರು ಅಮಾನವೀಯತೆ
ನೆರೆದಿದ್ದ ಜನತೆ ಒಕ್ಕೊರಲಿನಿಂದ “ಸೈಮನ್ ಹಿಂತಿರುಗು,” “ಬ್ರಿಟಿಷರಿಗೆ ಧಿಕ್ಕಾರ”, ‘ನಾವು ಹಿಂದೂಸ್ಥಾನಿಯರು, ಹಿಂದುಸ್ಥಾನ ನಮ್ಮದು. ಹಿಂತಿರುಗು ಸೈಮನ್ ನಿನ್ನದಾದ ದೇಶಕ್ಕೆ,’ ಎಂದು ಕೂಗಿದರು. ಜನತೆ ಗೋಡೆಯಂತೆ ಸೈಮನ್ ಆಯೋಗದ  ಸದಸ್ಯರು ಮುಂದೆ ಸಾಗದಂತೆ ನಿಂತಿದ್ದರು. ಪೆÇಲೀಸರು ಅವರನ್ನು ಚದುರಿಸಲು ನೋಡಿದರು. ಆದರೆ ಜನ ವಜ್ರಕೋಟೆಯಂತೆ ನಿಂತಿದ್ದರು. ಲಾಲಾಜಿಯವರು, “ಸರ್ಕಾರಕ್ಕೆ ಆಯೋಗವು ಪ್ರತಿಭಟನಾಕಾರರನ್ನು ನೋಡುವುದು ಬೇಡವೆಂದರೆ, ಸದಸ್ಯರಿಗೆ ಕಣ್ಣು ಕಟ್ಟಿ ಸರ್ಕಾರಿ ಬಂಗಲೆಗೆ ಕರೆದೊಯ್ಯಿರಿ” ಎಂದು ಹೇಳಿದರು. ಪೆÇಲೀಸ್ ಸೂಪರಿನ್‍ಟೆಂಡೆಂಟ್ ಜೆ.ಎ ಸ್ಕಾಟ್ ಲಾಠಿ ಚಾರ್ಜ್‍ಗೆ ಆದೇಶಿಸಿದನು. ಪೆÇೀಲೀಸರ ಅಂದಿನ ದೌರ್ಜನ್ಯದಿಂದ ನೂರಾರು ಜನ ತೀವ್ರವಾಗಿ ಗಾಯಗೊಂಡರು. ಆದರೂ ಜನ ಚದರಲಿಲ್ಲ. ಬಹಳಷ್ಟು ಜನರನ್ನು ಬಂಧಿಸಲಾಯಿತು. ಸ್ಕಾಟ್ ಲಾಲಾಜಿಯವರನ್ನು ಗುರುತಿಸಿ ಅವರ ಮೇಲೆ ಏಟುಗಳ ಸುರಿಮಳೆಯನ್ನು ಸುರಿಸಿದನು. ಲಾಲಾಜಿಯವರು ನೆತ್ತರು ಸುರಿಸುತ್ತಿದ್ದರೂ, ಆತ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಲಾಲಾಜಿಯವರು ಪ್ರಜ್ಞಾಹೀನರಾಗಿ ಕೆಳಗೆ ಬಿದ್ದರು. ಬೀಳುವ ಮುನ್ನ “ಇಂದು ನನ್ನ ಮೇಲೆ ಬಿದ್ದ ಪ್ರತಿಯೊಂದು ಏಟೂ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಯ ಮೇಲಿನ ಮೊಳೆಗಳಾಗಿವೆ.” ಎಂದು ಘೋಷಿಸಿದರು. ಎಷ್ಟು ಸತ್ಯವದು! ಅದಾದ  18 ವರ್ಷಕ್ಕೆ ನಮಗೆ ಸ್ವಾತಂತ್ರ್ಯ ದೊರೆಯಿತು, ಬ್ರಿಟಿಷರು ಇಲ್ಲಿಂದ ಕಾಲ್ಕೀಳಬೇಕಾಯಿತು.

ಲಾಲಾಜಿಯವರು ಕೆಳಕ್ಕೆ ಬಿದ್ದದ್ದನ್ನು ಕಂಡು ಜನತೆಯಲ್ಲಿ ಆವೇಶ ತುಂಬಿತು. ಬ್ರಿಟಿಷನೊಬ್ಬ ಲಾಲಾಜಿಯವರಂತಹ ನಾಯಕರ ಮೈ ಮುಟ್ಟುವಷ್ಟು ಧೈರ್ಯ ಮಾಡುತ್ತಾನೆಂದು ಭಾವಿಸಿರಲಿಲ್ಲ. ಈ ಸುದ್ದಿ ಹರಡುತ್ತಿದ್ದಂತೆ ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ರೋಷ ಉಕ್ಕಿತು. ಈ ರಾಷ್ಟ್ರೀಯ ಅಪಮಾನಕ್ಕೆ ಪಶ್ಚಾತ್ತಾಪ ಪಡುವಂತೆ ಕಾಂಗ್ರೆಸ್ ಬ್ರಿಟನ್ ಸರ್ಕಾರವನ್ನು ಕೇಳಿಕೊಂಡಿತು. ಆದರೆ ಬ್ರಿಟಿಷ್ ಸರ್ಕಾರ ಅದನ್ನು ಪರಿಗಣಿಸಲಿಲ್ಲ.

ಹಿಂದೆ ಜಲಿಯನ್‍ವಾಲಾಬಾಗ್‍ನ ದುರಂತ ನೋಡಿ ಬಂದ ಮೇಲೆ ಭಗತ್‍ಸಿಂಗ್ ಇಷ್ಟೇ ಆವೇಶಭರಿತರಾಗಿದ್ದರು. ಆದರೆ ಅವರು ಆಗಿನ್ನು 12 ವರ್ಷದ ಬಾಲಕ. ಆದರೆ ಈಗವರು 21 ವರ್ಷದ ಯುವಕ, ಮಾತ್ರವಲ್ಲದೆ ಉತ್ತರ ಭಾರತದ ಪ್ರಮುಖ ನಾಯಕರಲ್ಲೋರ್ವರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವೆನೆಂದು ಶಪಥ ಕೈಗೊಂಡು ತಮ್ಮ ಸಹಚರರ ಜೊತೆ ಚರ್ಚಿಸಲು ಲಾಹೋರಿನ ಮೊಜಾಂಗ್ ರಸ್ತೆಯಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು. ಅವರ ಪ್ರಕಾರ “ಸಾವಿರಾರು ಕರಪತ್ರಗಳು ಸಾಧಿಸಲಾಗದಂತಹ ಪ್ರಚಾರವನ್ನು ಒಂದು ಧೀರ ಕೃತಿ ಸಾಧಿಸಬಲ್ಲದು. ಇಂತಹ ಒಂದು ಕೃತಿಯಿಂದ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಇಂದು ಇದರ ವಿರೋಧಿಗಳಾಗಿರುವವರೂ ನಾಳೆ ಇದರೊಟ್ಟಿಗೆ ಸೇರ್ಪಡೆ ಹೊಂದುತ್ತಾರೆ. ದಂಗೆಯ ವಾತಾವರಣ ಎಲ್ಲೆಲ್ಲೂ ಪಸರಿಸಿದಾಗ ಸರ್ಕಾರದಲ್ಲಿ ಗೊಂದಲ ಕಂಡುಬರುತ್ತದೆ. ಸರ್ಕಾರದ ಬಿರುಸಿನ ದಮನಕಾರಿ ಕೃತ್ಯಗಳು, ಸಂಘರ್ಷವನ್ನು ಹೆಚ್ಚಿಸಿದಾಗ ಕ್ರಾಂತಿಯ ಕಿಡಿಗಳು ಹಾರುತ್ತವೆ.” ಇತರ ಕ್ರಾಂತಿಕಾರಿಗಳ ಅಭಿಪ್ರಾಯವೂ ಇದೇ ಆಗಿತ್ತು.

ಲಾಲಾಜಿಯವರ ಮರಣ
ನವೆಂಬರ್ 17ರಂದು ಲಾಲಾಜಿಯವರು ಈ ಆಘಾತದಿಂದಲೇ ಮರಣ ಹೊಂದಿದರು. ದೇಶವಿಡೀ ಶೋಕಾಚರಣೆ ಆಚರಿಸಿದರೂ ಜನರಲ್ಲಿ ಅದಕ್ಕೆ ನೂರು ಪಟ್ಟು ಆಕ್ರೋಶ ಎಲ್ಲರಲ್ಲೂ ತುಂಬಿತ್ತು. ಪ್ರತೀಕಾರದ ಕಿಚ್ಚು ದೇಶವಿಡೀ ಆವರಿಸಿತ್ತು. ಸಾಯುವ ಮುನ್ನ ಲಾಲಾಜಿಯವರು, “ಲಾಹೋರಿನಲ್ಲಿ ನಡೆದ ಘಟನೆ ಪುನರಾವರ್ತಿತವಾಗುತ್ತಾ ಹೋದರೆ, ಯುವಜನರು ನಮ್ಮ ಕೈಮೀರಿ ಹೋಗುತ್ತಾರೆ ಮತ್ತು ಸ್ವಾತಂತ್ರ್ಯ ಗಳಿಸಲೋಸಗ ತಮಗೆ ಸರಿ ಎನಿಸಿದ ಮಾರ್ಗವನ್ನು ಅನುಸರಿಸುತ್ತಾರೆ,” ಎಂದು ಎಚ್ಚರಿಕೆ ನೀಡಿದ್ದರು. ಅದರಂತೆ0iÉುೀ ದೇಶವಿಡೀ ಕಾಂಗ್ರೆಸ್‍ನ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳಲಾರಂಭಿಸಿತು ಮತ್ತು ಕ್ರಾಂತಿಕಾರಿಗಳ ಚಟುವಟಿಕೆಗಳ ಬಗ್ಗೆ ಆಸಕ್ತಿವಹಿಸಿತು.

ರಾಷ್ಟ್ರೀಯ ಅಪಮಾನಕ್ಕೆ ಪ್ರತೀಕಾರ
ಡಿಸೆಂಬರ್ 10ರಂದು ಎಚ್.ಎಸ್.ಆರ್.ಎ ಸಭೆ ನಡೆಯಿತು. ಅಧ್ಯಕ್ಷತೆಯನ್ನು ದುರ್ಗಾಭಾಬಿ ಎಂದೇ ಕರೆಸಿಕೊಳ್ಳುತ್ತಿದ್ದ ದುರ್ಗಾದೇವಿಯವರು ವಹಿಸಿದ್ದರು. ಸಭೆಯಲ್ಲಿ ಆeóÁದ್ ನುಡಿದರು “ಸಂಗಾತಿಗಳೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಶತ್ರುವಿನ ಸೈನ್ಯ, ಆಯುಧಗಳೂ, ಯುದ್ಧಕ್ಕೆ ಬೇಕಾದ ಇತರೆ ಸಾಮಗ್ರಿಗಳು ವಿವರಿಸಲೂ ಸಾಧ್ಯವಿಲ್ಲದಷ್ಟು ಅಗಾಧವಾಗಿವೆ. ಇದನ್ನು ವಿರೋಧಿಸಲು ನಮ್ಮಲ್ಲಿರುವುದು ಕೇವಲ ತ್ಯಾಗಮಯ ಭಾವನೆ ಮತ್ತು ಸಾರ್ವಜನಿಕ ಬೆಂಬಲ.” ಸಭೆ ಸರ್ವಾನುಮತದಿಂದ ಸ್ಕಾಟ್‍ನನ್ನು ಕೊಲ್ಲಲು ತೀರ್ಮಾನಿಸಿತು. ಅದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಾಗಿರದೆ, ತಮ್ಮ ರಾಷ್ಟ್ರದ ಧೀಮಂತ ನಾಯಕನಿಗಾದ ಅಪಮಾನ, ದೇಶಕ್ಕಾದ ಅಪಮಾನಕ್ಕೆ ಪ್ರತಿಯಾಗಿ ಉತ್ತರವನ್ನು ನೀಡುವ ಉದ್ದೇಶವನ್ನು ಹೊಂದಿತ್ತು. ಈ ಹೋರಾಟದಲ್ಲಿ ತಮ್ಮ ಜೀವ ಹೋಗಬಹುದೆಂದು ಕ್ರಾಂತಿಕಾರಿಗಳಿಗೆ ತಿಳಿದಿದ್ದರೂ ಸಹ ದೇಶದ ಜನತೆಗೆ, ಮುಖ್ಯವಾಗಿ ಯುವಜನತೆಗೆ, ‘ಅಪಮಾನವನ್ನು ಮೌನವಾಗಿ ಸಹಿಸಬೇಡಿ’ ಎನ್ನುವ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಿತ್ತು.

ದುರ್ಗಾ ಭಾಬಿ ತಾನೇ ಈ ಕೆಲಸದಲ್ಲಿ ಭಾಗಿಯಾಗುವೆನೆಂದು ಹೇಳಿದರೂ, ಇತರರು ಈ ಅಪಾಯಕಾರಿ ಕೆಲಸವನ್ನು ಆಕೆಗೆ ಒಪ್ಪಿಸಲು ತಯಾರಿರಲಿಲ್ಲ. ಆಕೆ ಹೆಣ್ಣು ಮತ್ತು ಅಸಹಾಯಕಳೆಂದಲ್ಲ. ಕ್ರಾಂತಿಕಾರಿಗಳು ಸ್ತ್ರೀ  ಅಬಲೆ ಎಂಬ ತತ್ವವನ್ನು ವಿರೋಧಿಸುತ್ತಿದ್ದವರು. ದುರ್ಗಾದೇವಿ ಈಗಾಗಲೇ ಮೂರು ವರ್ಷ ಜೈಲು ಶಿಕ್ಷೆ  ಅನುಭವಿಸಿದ್ದವರು. ಆದರೆ ಆಕೆ ಅವರೆಲ್ಲರಿಗೂ ಗೌರವಾನ್ವಿತ ಅತ್ತಿಗೆಯಾಗಿದ್ದರು. ಆಕೆಗೊಂದು ಸಣ್ಣ ಮಗುವಿತ್ತು. ಆದ್ದರಿಂದಲೇ ಈ ಕಾರ್ಯಾಚರಣೆಯಿಂದ ಆಕೆಯನ್ನು ದೂರವಿಡಲು ನಿರ್ಧರಿಸಿದರು.
ಆ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದರೂ, ಆ0iÉ್ಕುಯಾದದ್ದು ಭಗತ್‍ಸಿಂಗ್, ರಾಜಗುರು, ಆeóÁದ್ ಮತ್ತು ಜಯಗೋಪಾಲ್. ಸುಖದೇವ್ ತಾನೇ ಕೆಲಸ ವಹಿಸಿಕೊಳ್ಳುತ್ತೇನೆಂದರೂ, ಆತ ಕಾರ್ಯಾಚರಣೆಯನ್ನು ರೂಪಿಸುವವರಾದ್ದರಿಂದ ಮತ್ತು ದೇಶದ ವಿವಿಧ ಭಾಗಗಳ ಕ್ರಾಂತಿಕಾರಿಗಳನ್ನು ಒಟ್ಟುಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದುದರಿಂದ ಅವರನ್ನು ಈ ಕಾರ್ಯದಿಂದ ಹೊರಗಿಡಲಾಯಿತು. ಜಯಗೋಪಾಲ್ ಪೆÇಲೀಸ್ ಠಾಣೆಯ ಹೊರನಿಂತು ಸ್ಕಾಟ್ ಬಂದ ತಕ್ಷಣ ಸೂಚನೆ ನೀಡಬೇಕಿತ್ತು. ಭಗತ್‍ಸಿಂಗ್ ಸ್ಕಾಟ್‍ನಿಗೆ ಗುಂಡಿಟ್ಟು ಕೊಲ್ಲಬೇಕಿತ್ತು. ರಾಜಗುರು ಭಗತ್‍ಸಿಂಗ್‍ರ  ಜೊತೆಗಿದ್ದು ಅವರಿಗೆ ರಕ್ಷಣೆ ನೀಡಬೇಕಿತ್ತು. ಆeóÁದ್ ಇವರ ತಪ್ಪಿಸಿಕೊಳ್ಳುವಿಕೆಗೆ ಸಹಾಯ ಮಾಡಬೇಕಿತ್ತು.


ಬ್ರಿಟಿಷ್ ವ್ಯವಸ್ಥೆಯ ಪ್ರತಿನಿಧಿಯ ಹತ್ಯೆ
ಡಿಸೆಂಬರ್ 17ರಂದು ಸ್ಕಾಟ್ ಪೆÇಲೀಸ್ ಠಾಣೆಗೆ ಬರಲಿಲ್ಲ. ಹೊರಗಡೆ ಬಂದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಜೆ.ಪಿ ಸ್ಯಾಂಡರ್ಸ್‍ನನ್ನೇ ಸ್ಕಾಟ್ ಎಂದು ತಪ್ಪಾಗಿ ಭಾವಿಸಿ ಜೈಗೋಪಾಲ್ ಸೂಚನೆ ನೀಡಿದ. ರಾಜಗುರು ತಕ್ಷಣವೇ ಗುಂಡು ಹಾರಿಸಿದರು. ಭಗತ್‍ಸಿಂಗ್ ‘ಅವನಲ್ಲ, ಅವನಲ್ಲ’ ಎನ್ನುವಷ್ಟರಲ್ಲಿ ಸ್ಯಾಂಡರ್ಸ್ ಸತ್ತು ಹೋಗಿದ್ದ. ಭಗತ್‍ಸಿಂಗ್‍ರಿಗೆ ಅದು ಸ್ಯಾಂಡರ್ಸ್ ಎಂದು ಗೊತ್ತಾದರೂ ಅದರ ಬಗ್ಗೆ ವಿಷಾದವೇನೂ ಇರಲಿಲ್ಲ ಏಕೆಂದರೆ ಸ್ಯಾಂಡರ್ಸ್ ಕೂಡ ಲಾಲಾಜಿಯವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದ. ಆತನ ಸಾವನ್ನು ಖಚಿತ ಪಡಿಸಿಕೊಳ್ಳಲು ಭಗತ್ ಗುಂಡು ಹಾರಿಸಿದರು.

ಭಗತ್‍ಸಿಂಗ್ ಮತ್ತು ರಾಜಗುರು ಅಲ್ಲಿಂದ ತಪ್ಪಿಸಿಕೊಂಡು ಡಿ.ಎ.ವಿ. ಕಾಲೇಜಿನತ್ತ ಓಡಿದರು. ಇವರ ರಕ್ಷಣೆಗೆ ಬಂದಿದ್ದ ಆeóÁದರು ಇವರೊಂದಿಗಿದ್ದರು. ಮೂವರೂ, ಏನೂ ನಡೆದೇ ಇಲ್ಲವೇನೋ ಎಂಬಂತೆ ಶಾಂತವಾಗಿ ತಾವು ಸೈಕಲ್ ನಿಲ್ಲಿಸಿದ ಕಡೆ ಹೋಗಿ ಅದನ್ನು ಹತ್ತಿಕೊಂಡು ತಮ್ಮ ಮನೆಗೆ ಹಿಂತಿರುಗಿದರು.

ಸ್ವಲ್ಪ ಹೊತ್ತಿನಲ್ಲಿ0iÉುೀ ನಗರದ ಎಲ್ಲೆಡೆಯಲ್ಲಿಯೂ ಎಚ್‍ಎಸ್‍ಆರ್‍ಎ ಭಿತ್ತಿಪತ್ರಗಳು ಕಾಣಿಸಿಕೊಂಡವು.
“ಜೆ.ಪಿ.ಸ್ಯಾಂಡರ್ಸ್ ಸಾವು: ಲಾಲಾಜಿಯವರ ಹತ್ಯೆಗೆ ಪ್ರತೀಕಾರ”
“ಸಾಮಾನ್ಯ ಪೆÇಲೀಸ್ ಅಧಿಕಾರಿಯೊಬ್ಬ ಹಿಂದೂಸ್ಥಾನದ ಮುನ್ನೂರು ಮಿಲಿಯನ್ ಜನರ ಪ್ರೀತಿಗೆ ಪಾತ್ರರಾದ, ಹಿರಿಯರಾದ ಲಾಲಾಜಿಯವರ ಮೈಮುಟ್ಟುವಷ್ಟು ಮತ್ತು ಅವರ ಸಾವಿಗೆ ಕಾರಣನಾಗುವಷ್ಟು ನೀಚತನಕ್ಕೆ ಇಳಿಯುತ್ತಾನೆಂದು ಊಹಿಸಿಕೊಳ್ಳುವುದೇ ಅಸಾಧ್ಯ. ರಾಷ್ಟ್ರದ ರಾಷ್ಟ್ರೀಯತೆಯ ಮೇಲೆ ಬಿದ್ದ ಹೊಡೆತಗಳು ನಮ್ಮ ದೇಶದ ಯುವಜನರ ಸ್ಥೈರ್ಯಕ್ಕೆ ಸವಾಲನ್ನೊಡ್ಡಿದೆ. ಇಡೀ ಪ್ರಪಂಚಕ್ಕೆ ತಿಳಿಯಲಿ. ಭಾರತವಿನ್ನೂ ಬದುಕಿದೆ, ಭಾರತೀಯ ಯುವಜನರ ರಕ್ತವಿನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ, ಈಗಲೂ ಸಹ ಅವರು ತಮ್ಮ ಜೀವವನ್ನು ಬಲಿದಾನ ಮಾಡಬಲ್ಲರು.

“ಎಚ್ಚರಿಕೆ ನಿರಂಕುಶ ಪ್ರಭುಗಳೇ ಎಚ್ಚರಿಕೆ”
“ಶೋಷಣೆ, ತುಳಿತಕ್ಕೊಳಪಟ್ಟ ಜನತೆಯ ಭಾವನೆಗಳನ್ನು ಘಾಸಿಗೊಳಿಸದಿರಿ. ಇಂತಹ ನೀಚ ಕೃತ್ಯಗಳನ್ನು ಎಸಗುವ ಮುನ್ನ ಮತ್ತೆ ಮತ್ತೆ ಯೋಚಿಸಿರಿ.... ಪರಕೀಯ ಸರ್ಕಾರದ ದಮನ ಮತ್ತು ದಬ್ಬಾಳಿಕೆಯಡಿಯಲ್ಲಿಯೂ ಸಹ ಯುವಜನರ ನಮ್ಮ ಪಕ್ಷ, ದುರಹಂಕಾರಿ ಆಳ್ವಿಕರಿಗೆ ಪಾಠ ಕಲಿಸಲು ಜೀವಂತವಾಗಿರುತ್ತದೆ. ಅವರು ಎಲ್ಲಾ ವಿರೋಧಗಳು ಮತ್ತು ದಮನದಡಿಯಲ್ಲಿಯೂ ಸಹ, ಗಲ್ಗಂಬದಲ್ಲಿಯೂ ಸಹ, ಇದನ್ನು ಪುನಃ ಪುನಃ ಸಾರಿಸಾರಿ ಹೇಳುತ್ತಾರೆ.”

“ಕ್ರಾಂತಿ ಚಿರಾಯುವಾಗಲಿ”
“ವ್ಯಕ್ತಿಯ ಸಾವಿಗಾಗಿ ನಮಗೆ ವಿಷಾದವಿದೆ. ಆದರೆ ವಿಶ್ವದ ಅತ್ಯಂತ ಅಮಾನವೀಯ ನಿರಂಕುಶ ಸರ್ಕಾರದ ಪ್ರತಿನಿಧಿಯಾದ ವ್ಯಕ್ತಿ ಸತ್ತಿದ್ದಾನೆ. ಅತ್ಯಂತ ಕ್ರೂರವಾದ, ಹೀನವಾದ ಮತ್ತು ತುಚ್ಛವಾದ ಸಂಸ್ಥೆಯೊಂದರ ಪ್ರತಿನಿಧಿ ಸತ್ತಿದ್ದಾನೆ. ಮಾನವನ ರಕ್ತಪಾತಕ್ಕಾಗಿ ವಿಷಾದವಿದೆ. ಆದರೆ ಕ್ರಾಂತಿಯಲ್ಲಿ ವ್ಯಕ್ತಿಯ ಬಲಿ ಅನಿವಾರ್ಯ.”
“ಕ್ರಾಂತಿ ಚಿರಾಯುವಾಗಲಿ.”

ಬ್ರಿಟಿಷರಿಗೆ ಆಘಾತ, ಜನತೆಯ ಮೆಚ್ಚುಗೆ
ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ದಿಗ್ಭ್ರಮೆಗೊಳಗಾಯಿತು. ಹತ್ಯೆ ಮಾಡಿದವರ ಹುಡುಕಾಟ ಆರಂಭಿಸಿರು. ನಗರದ ಎಲ್ಲೆಡೆ ಪೆÇಲೀಸ್ ಸಿಬ್ಬಂದಿಯನ್ನು ಹಾಕಲಾಯಿತು. ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಯಿತು. ದೇಶದ ಜನತೆ ಸಹ ಕ್ರಾಂತಿಕಾರಿಗಳ ಇಂತಹ ದಿಟ್ಟ ಕಾರ್ಯದಿಂದ ಒಂದೆಡೆ ಆಶ್ಚರ್ಯಚಕಿತರಾದರೂ ಇನ್ನೊಂದೆಡೆ ಲಾಲಾಜಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ಯುವಕರ ಬಗ್ಗೆ ಅಗಾಧವಾದ ಮೆಚ್ಚುಗೆಯನ್ನು ಬೆಳೆಸಿಕೊಂಡರು.  ನಂತರದ ದಿನಗಳಲ್ಲಿ ಸ್ಯಾಂಡರ್ಸ್ ಕೊಲೆಗೆ ಕಾರಣರು ಭಗತ್ ಮತ್ತು ಸಂಗಡಿಗರೆಂದು ತಿಳಿದಾಗ ಜನತೆ ಅವರನ್ನು ಭಯೋತ್ಪಾದಕರೆಂದು ಹೀಗಳೆಯಲಿಲ್ಲ. ಬದಲಿಗೆ ಭಾರತದ ಗೌರವವನ್ನು ರಕ್ಷಿಸಿದ ಧೀರ ಯುವಕರು ಎಂದು ಹಾಡಿಹೊಗಳಿತು. ಕೆಲವೇ ದಿನಗಳಲ್ಲಿ ಭಗತ್ ಪಂಜಾಬಿನ ಮನೆಮಾತಾದರು. ಹಳ್ಳಿಹಳ್ಳಿಗಳಲ್ಲೂ ಅವರ ಚಿತ್ರವಿದ್ದ ಕ್ಯಾಲೆಂಡರ್‍ಗಳು  ಭಿತ್ತಿ ಪತ್ರಗಳು ಕಾಣಿಸಿಕೊಂಡವು. ಅವರ ಕುರಿತ ಎಷ್ಟೋ ಹಾಡುಗಳನ್ನು ರಚಿಸಿ ಹಾಡಲಾಯಿತು. ಜನತೆ ಹೆಮ್ಮೆಯಿಂದ ಅವರನ್ನು “ಭಾರತದ ವೀರಪುತ್ರ” ಎಂದು ಕರೆದರು.

ಲಾಹೋರಿನಿಂದ ಸುರಕ್ಷಿತ ತಾಣದೆಡೆಗೆ
ಅವರು ನಡೆಸಿದ ಹತ್ಯೆಗೆ ಸಾಕ್ಷಿಗಳಾರೂ ಇಲ್ಲದಿದ್ದರೂ, ಲಾಹೋರಿನಿಂದ ಹೊರ ಹೋಗುವುದು ಸುರಕ್ಷಿತವೆಂದು ಎಲ್ಲರೂ ಭಾವಿಸಿದರು. ಆ ಯೋಜನೆಯನ್ನು ರೂಪಿಸಿದವರು ಸುಖದೇವ್. ಭಗತ್‍ಸಿಂಗ್ ಬ್ರಿಟಿಷ್ ಅಧಿಕಾರಿಯಂತೆ ವೇಷ ಧರಿಸಿ ದುರ್ಗಾಭಾಬಿಯವರ ಮನೆಗೆ ಹೋದರು. ಹಿಂಜರಿಕೆಯಿಂದಲೇ, “ಭಾಬಿ (ಅತ್ತಿಗೆ), ನನ್ನ ಪತ್ನಿಯಂತೆ ವೇಷ ಧರಿಸಿ ನನ್ನೊಂದಿಗೆ ಬರಲು ಸಿದ್ಧರಿರುವಿರಾ, ಇಲ್ಲಿಂದ ತಪ್ಪಿಸಿಕೊಳ್ಳಲು ಇದೇ ಉತ್ತಮ ಮಾರ್ಗ” ಎಂದರು. ಸಂಘಟನೆಯ ಶಿಸ್ತಿನ ಸಿಪಾಯಿಯಾಗಿದ್ದ ದುರ್ಗಾದೇವಿ ತಕ್ಷಣವೇ ಸಮ್ಮತಿಸಿದರು. ಇದು ಅವರ ಮನೋಸ್ಥೈರ್ಯ ಮತ್ತು ಹೋರಾಟದ ಬಗ್ಗೆ ಇದ್ದ ನಿಷ್ಠೆಗೆ ಮತ್ತು ಭಗತ್‍ರ ಬಗ್ಗೆ ಇದ್ದ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ. ಸೇವಕನಾಗಿ ರಾಜಗುರು ನಟಿಸುತ್ತಾ ಲಾಹೋರಿನ ರೈಲ್ವೆ ಸ್ಟೇಷನ್ನಿನಲ್ಲಿ ಪೆÇಲೀಸರ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಕಲ್ಕತ್ತಾಗೆ ರೈಲು ಹತ್ತಿದರು. ಆeóÁದ್ ಸಾಧುಗಳ ಗುಂಪಿನಲ್ಲಿ ಸೇರಿ ಪೆÇೀಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದರು.

ಆದರೆ ಮುಂಜಾಗರೂಕತೆಯ ಕ್ರಮವಾಗಿ ಕಾನ್ಪುರದಲ್ಲಿ ಇಳಿದು ಹೋಟೆಲ್ ಒಂದರಲ್ಲಿ ತಂಗಿದರು. ಮರುದಿನ ಕಲ್ಕತ್ತಾದ ಟ್ರೈನ್ ಹತ್ತಿದರು. ಮಾರ್ಗದಲ್ಲಿ ಭಗತ್‍ಸಿಂಗ್ ತಮ್ಮ ಬಹಳಷ್ಟು ವಿಷಯಗಳನ್ನು ದುರ್ಗಾಭಾಬಿಯವರಲ್ಲಿ ಹೇಳಿಕೊಂಡರು. ಅವರ ಬಗ್ಗೆ ತಿಳಿದ ಭಾಬಿಗೆ ಆಶ್ಚರ್ಯವಾಯಿತು. ಏಕೆಂದರೆ ಅವರು ಭಗತ್‍ಸಿಂಗ್‍ರವರು ಆಲೋಚನೆಯಿಂದ ಕೆಲಸ ಮಾಡುವ ಕ್ರಾಂತಿಕಾರಿಯೇ ಹೊರತು ಅಲ್ಲಿ ಭಾವುಕತೆಗೆ ಅವಕಾಶವಿಲ್ಲ ಎಂದುಕೊಂಡಿದ್ದರು. ಆದರೆ ಭಗತ್‍ಸಿಂಗ್‍ರೊಡನೆ ಮಾತನಾಡಿದ ಮೇಲೆ ಅವರು ವ್ಯಕ್ತಿಗಳಿಗೆ, ಜೀವನಕ್ಕೆ, ಭಾವನೆಗಳಿಗೆ ಎಷ್ಟು ಬೆಲೆ ಕೊಡುತ್ತಿದ್ದರು ಎಂಬುದನ್ನು ಅರಿತರು. ಅನಗತ್ಯವಾಗಿ ಯಾರಿಗೂ ಕೇಡು ಬಯಸದ, ಎಲ್ಲರಿಗೂ ಒಳಿತನ್ನೇ ಬಯಸುವ, ಉದಾತ್ತ ವ್ಯಕ್ತಿತ್ವ ಹೊಂದಿದ ಅಪರೂಪದ ವ್ಯಕ್ತಿ ಭಗತ್‍ಸಿಂಗ್ ಎಂಬುದನ್ನು ಅರಿತರು.
 

(ಮುಂದುವರೆಯುತ್ತದೆ)
ಸುಧಾ ಜಿ

ಕಾಮೆಂಟ್‌ಗಳಿಲ್ಲ: