Pages

ಅನುವಾದ: "ಲೆನಿನ್ ರವರ ಭಾಷಣ"

ಶ್ರಮಿಕ ಮಹಿಳೆಯರ ಮೊದಲ ಅಖಿಲ ರಷ್ಯ ಕಾಂಗ್ರೆಸ್ ನಲ್ಲಿ ಲೆನಿನ್ ರವರು ಮಾಡಿದ ಭಾಷಣ

ಕಾಮ್ರೇಡರೇ ಒಂದರ್ಥದಲ್ಲಿ ಶ್ರಮಿಕರ ಸೈನ್ಯದ ಮಹಿಳಾ ವಿಭಾಗದ ಈ ಕಾಂಗ್ರೆಸ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಪ್ರತಿ ದೇಶದಲ್ಲಿಯೂ ಮಹಿಳೆಯರನ್ನು ಕಾರ್ಯಾಚರಣೆಗೆ ಇಳಿಸುವುದು ಅತ್ಯಂತ ಕಷ್ಟಕರವಾದದ್ದು . 
ಬಹಳಷ್ಟು ಜನ ದುಡಿಯುವ ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಸಮಾಜವಾದಿ ಕ್ರಾಂತಿಯಾಗಲು ಸಾಧ್ಯವಿಲ್ಲ.

ಎಲ್ಲಾ ನಾಗರಿಕ ದೇಶಗಳಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲಿಯೂ ಸಹ ಮಹಿಳೆಯರು ಗೃಹಕೃತ್ಯದ ಗುಲಾಮರಲ್ಲದೆ ಇನ್ನೇನು ಅಲ್ಲ. ಮಹಿಳೆಯರು ಯಾವುದೆ ಬಂಡವಾಳಶಾಹಿ ರಾಜ್ಯದಲ್ಲಿ, ಅತ್ಯಂತ ಸ್ವತಂತ್ರ ಗಣರಾಜ್ಯದಲ್ಲಿಯು ಸಹ ಸಂಪೂರ್ಣವಾದ ಸಮಾನತೆಯನ್ನು ಅನುಭವಿಸುತ್ತಿಲ್ಲ. 

ಸೋವಿಯತ್ ಗಣರಾಜ್ಯ ಮಾಡಿದ ಪ್ರಾಥಮಿಕ ಕಾರ್ಯಗಳಲ್ಲಿ ಒಂದೆಂದರೆ, ಮಹಿಳೆಯರ ಹಕ್ಕುಗಳ ಮೇಲಿರುವ ಎಲ್ಲಾ ನಿರ್ಬಂಧಗಳನ್ನು ನಿಷೇಧಿಸಿರುವುದು.  ಸೋವಿಯತ್ ಸರ್ಕಾರ  ಬೂರ್ಜ್ವ ಅವನತಿಯ, ತುಳಿತದ  ಮತ್ತು ಅವಮಾನದ ಮೂಲವಾದ ವಿಚ್ಛೇದನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಸಂಪೂರ್ಣ ವಿಚ್ಛೇದನ ಸ್ವಾತಂತ್ರ್ಯದ ಕಾನೂನನ್ನು ಜಾರಿಗೊಳಿಸಿ ಒಂದು ವರ್ಷವಾಗುತ್ತಾ ಬಂದಿದೆ ನಾವು ಕಾನೂನುಬದ್ಧ ಮತ್ತು ಕಾನೂನುಬಾಹಿರ ಮಕ್ಕಳ ನಡುವಿನ ಎಲ್ಲಾ ಅಂತರಗಳನ್ನು ತೆಗೆದುಹಾಕುವ ಆದೇಶವನ್ನು ಹೊರಡಿಸಿದ್ದೇವೆ. ಎಲ್ಲಾ ರಾಜಕೀಯ  ನಿರ್ಬಂಧಗಳನ್ನು ತೆಗೆದುಹಾಕಿದ್ದೇವೆ. ವಿಶ್ವದಲ್ಲಿ ಇನ್ನೆಲ್ಲಿಯು ಸಹ ದುಡಿಯುವ ಮಹಿಳೆಯರ ಸಮಾನತೆಯನ್ನು ಇಷ್ಟು ಸಂಫೂರ್ಣವಾಗಿ ಸ್ಥಾಪಿಸಲಾಗಿಲ್ಲ.

ಈ ಪುರಾತನ ನಿಯಮಗಳಿಂದ ಅತ್ಯಂತ  ಹೆಚ್ಚು ತೊಂದರೆಗೊಳಗಾಗುವುದು ದುಡಿಯುವ ಶ್ರಮಿಕ ಮಹಿಳೆಯೆಂಬುದು ನಮಗೆಲ್ಲರಿಗೂ ತಿಳಿದಿದೆ.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಕಾನೂನು ಮಹಿಳೆಯರ ಹಕ್ಕುಗಳನ್ನು ನಿರಾಕರಿಸುವ ಎಲ್ಲವನ್ನು  ತೆಗೆದುಹಾಕಿದೆ. ಆದರೆ ಮುಖ್ಯವಾದದ್ದು ಕಾನೂನಲ್ಲ. ನಗರಗಳಲ್ಲಿ  ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ವಿವಾಹದ ಸಂಪೂರ್ಣ ಸ್ವಾತಂತ್ರ್ಯದ ಕಾನೂನು ಚೆನ್ನಾಗಿ ಕೆಲಸಮಾಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಈ ಕಾನೂನು ಸತ್ತ ಅಕ್ಷರವಾಗಿ ಉಳಿದುಬಿಡುತ್ತದೆ. ಅಲ್ಲಿ ಧಾರ್ಮಿಕ ವಿವಾಹಗಳು ಜಾರಿಯಲ್ಲಿದೆ.  ಇದು ಪುರೋಹಿತರ ಪ್ರಭಾವದಿಂದ; ಈ ಪಿಡುಗನ್ನು ತೊಡೆದುಹಾಕುವುದು ಹಳೆಯ ಕಾನೂನನ್ನು ತೆಗೆದುಹಾಕುವುದಕ್ಕಿಂತ ಕಠಿಣ .

ನಾವು ಧಾರ್ಮಿಕ ಪೂರ್ವಗ್ರಹಗಳನ್ನು ಹೋರಾಡುವಾಗ ಅತ್ಯಂತ  ಜಾಗರೂಕರಾಗಿರಬೇಕು ; ಕೆಲವರು ಈ ಹೋರಾಟವನ್ನು ನಡೆಸುವಾಗ ಧಾರ್ಮಿಕ  ಭಾವನೆಗಳಿಗೆ ನೋವುಂಟು ಮಾಡಿ ಹೋರಾಟಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ನಾವು ಪ್ರಚಾರ ಮತ್ತು ಶಿಕ್ಷಣವನ್ನು  ಬಳಸಬೇಕು.ಅತಿ ತೀವ್ರವಾದ ಹೋರಾಟ ಅನಗತ್ಯವಾಗಿ  ಜನತೆಯ ಆಗ್ರಹಕ್ಕೆ ಕಾರಣವಾಗಬಹುದು. ಇಂತಹ ಹೋರಾಟದ ವಿಧಾನಗಳು ಧರ್ಮದ  ಆಧಾರದ  ಮೇಲೆ ಜನತೆಯ ವಿಭಜಿಸುವಿಕೆಯನ್ನು ಮುಂದುವರಿಸುತ್ತದೆ. ಆದರೆ ನಮ್ಮ ಶಕ್ತಿಯಿರುವುದು, ಐಕ್ಯತೆಯಲ್ಲಿ. ಧಾರ್ಮಿಕ ಪೂರ್ವಗ್ರಹದ ಆಳವಾದ ಮೂಲವೆಂದರೆ ಬಡತನ ಮತ್ತು ಅಜ್ಙಾನ; ಈ ಪಿಡುಗುಗಳನ್ನು ನಾವು ಎದುರಿಸಲೇಬೇಕು.

ಇಲ್ಲಿಯವರೆಗು ಮಹಿಳೆಯ ಸ್ಥಾನವನ್ನು ಗುಲಾಮರೊಂದಿಗೆ ಹೋಲಿಸಲಾಗಿದೆ; ಮಹಿಳೆಯರನ್ನು ಗೃಹಬಂಧಿಯನ್ನಾಗಿಸಿದೆ. ಸಮಾಜವಾದ ಮಾತ್ರವೇ  ಇದರಿಂದ ಮಹಿಳೆಯರನ್ನು ಮುಕ್ತಗೊಳಿಸಬಹುದಾಗಿದೆ. ನಾವು ಸಣ್ಣ ಪ್ರಮಾಣದ ವೈಯುಕ್ತಿಕ ಕೃಷಿಯಿಂದ ಸಾಂಘಿಕ ಕೃಷಿಗೆ, ಸಾಂಘಿಕ  ಕೃಷಿಯಿಂದ  ಸಾಮೂಹಿಕ ಕೃಷಿಗೆ ಬದಲಾಯಿಸಿದಾಗ ಮಾತ್ರ ಮಹಿಳೆಯರನ್ನು ಸಂಪೂರ್ಣವಾಗಿ ವಿಮೋಚನೆಗೊಳಿಸಬಹುದು. ಅದು ಕಷ್ಟಕರವಾದ ಕೆಲಸ. ಆದರೆ ಈಗ ಬಡರೈತರ ಸಮಿತಿಗಳನ್ನು ರಚಿಸಲಾಗುತ್ತಿದೆ, ಸಮಾಜವಾದಿ ಕ್ರಾಂತಿ ಸಘನೀಕರಣವಾಗುತ್ತಿರುವ ಕಾಲ ಬಂದಿದೆ. 

ಗ್ರಾಮೀಣ ಜನತೆಯ ಅತ್ಯಂತ  ಬಡವರ್ಗ ಈಗ ತನ್ನನ್ನೇ  ಸಂಘಟಿಸಿಕೊಳ್ಳಲಾರಂಭಿಸಿದೆ ಮತ್ತು ಸಮಾಜವಾದ ಬಡರೈತರ ಸಂಘಟನೆಗಳಲ್ಲಿ ಸಧೃಡವಾಗಿ ಸ್ಥಾಪಿತವಾಗುತ್ತಿದೆ.

ಮೊದಲು, ಸಾಮಾನ್ಯವಾಗಿ ಪಟ್ಟಣವು ಕ್ರಾಂತಿಕಾರಕವಾಗುತ್ತಿತ್ತು. ತದನಂತರ ಗ್ರಾಮೀಣ ಭಾಗ .

ಆದರೆ ಪ್ರಸಕ್ತ ಕ್ರಾಂತಿಯು ಹೆಚ್ಚು ಗ್ರಾಮೀಣ ಭಾಗದ ಮೇಲೆ ಆಧಾರ ಪಟ್ಟಿದೆ ಮತ್ತು ಅದರಲ್ಲಿ ಕ್ರಾಂತಿಯ ಮಹತ್ವ ಮತ್ತು ಶಕ್ತಿಯಡಗಿದೆ. ಮಹಿಳೆಯರು ಕ್ರಾಂತಿಯಲ್ಲಿ ಎಷ್ಟರ ಮಟ್ಟಿಗೆ ಭಾಗವಹಿಸುತ್ತಾರೆ ಎಂಬುದರ ಆಧಾರದ ಮೇಲೆ ಕ್ರಾಂತಿಯ ಯಶಸ್ಸು ನಿಂತಿದೆ ಎನ್ನುವುದನ್ನು ಎಲ್ಲಾ ವಿಮೋಚನಾ ಚಳುವಳಿಗಳ ಅನುಭವವು ತೋರಿಸಿಕೊಟ್ಟಿದೆ. ಮಹಿಳೆಯರು ಸ್ವತಂತ್ರವಾಗಿ ಕಾರ್ಮಿಕವರ್ಗದ ಸಮಾಜವಾದಿ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸೋವಿಯತ್  ಸರ್ಕಾರ  ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸೋವಿಯತ್ ಸರ್ಕಾರ ಈಗ ಕಷ್ಟಕರ ಪರಿಸ್ಥಿತಿಯಲ್ಲಿದೆ , ಏಕೆಂದರೆ ಎಲ್ಲಾ ದೇಶಗಳ ಸಾಮ್ರಾಜ್ಯಶಾಹಿಗಳು ಸೋವಿಯತ್ ರಷ್ಯಾ ಅನ್ನು ದ್ವೇಷಿಸುತ್ತಾರೆ ಮತ್ತು ನಮ್ಮೊಂದಿಗೆ ಯುದ್ಧ ಮಾಡಲು ಸಜ್ಜಾಗುತ್ತಿದ್ದಾರೆ; ನಾವು ಹಲವು ದೇಶಗಳಲ್ಲಿ ಕ್ರಾಂತಿಯ ಕಿಡಿಯನ್ನು ಹರಡಲು ಕಾರಣವಾಗಿದ್ದೇವೆ ಎಂದು ಮತ್ತು ಸಮಾಜವಾದದೆಡೆಗೆ ದೃಢವಾದ ಹೆಜ್ಜೆ ಹಾಕುತ್ತಿದ್ದೇವೆ ಎಂದು. 

ಕ್ರಾಂತಿಕಾರಿ  ರಷ್ಯಾವನ್ನು ವಿನಾಶಗೊಳಿಸಲು ಹೊರಟಿರುವವರಿಗೆ ಈಗ ತಮ್ಮದೆ ಕಾಲಡಿಯಲ್ಲಿ ಭೂಮಿ ಉರಿಯುತ್ತಿರುವ  ಅನುಭವವಾಗುತ್ತಿದೆ. ಜರ್ಮನಿಯಲ್ಲಿ ಹೇಗೆ ಕ್ರಾಂತಿಕಾರಿ  ಚಳುವಳಿ ಹರಡುತ್ತಿದೆ ಎಂಬುದು ನಿಮಗೆಲ್ಲ ಗೊತ್ತು. ಡೆನ್ಮಾರ್ಕ್ ನಲ್ಲಿಯೂ ಕಾರ್ಮಿಕರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸ್ವಿಟ್ಸರ್ಲೆಂಡಿನಲ್ಲಿ  ಮತ್ತು ಹಾಲೆಂಡ್ ನಲ್ಲಿ ಕ್ರಾಂತಿಕಾರಿ ಚಳುವಳಿ ಬಲಿಷ್ಟವಾಗುತ್ತಿದೆ. ಈ ಸಣ್ಣ ದೇಶಗಳಲ್ಲಿನ ಕ್ರಾಂತಿಕಾರಿ ಚಳುವಳಿ ತನ್ನಷ್ಟಕ್ಕೆ ತಾನೆ ಯಾವುದೆ ಮಹತ್ವವನ್ನು ಹೊಂದಿಲ್ಲದೆ ಇರಬಹುದು, ಆದರೆ ಅದು ನಿರ್ದಿಷ್ಟ ವಾಗಿ ಮಹತ್ವಪೂರ್ಣವಾಗಿದೆ. ಏಕೆಂದರೆ ಈ ದೇಶಗಳಲ್ಲಿ ಯಾವುದೆ ಯುದ್ಧವಿರಲಿಲ್ಲ ಮತ್ತು ಈ ದೇಶಗಳಲ್ಲಿ ಅತ್ಯಂತ" ಸಾಂವಿಧಾನಿಕ" ಪ್ರಜಾತಾಂತ್ರಿಕ ವ್ಯವಸ್ಥೆಯಿತ್ತು. ಇಂತಹ ದೇಶಗಳಲ್ಲಿಯೆ ಚಳುವಳಿಗಳು ನಡೆಯುತ್ತಿವೆ ಎಂದರೆ ವಿಶ್ವದಾದ್ಯಂತ  ಎಲ್ಲೆಡೆ ಕ್ರಾಂತಿಕಾರಿ ಚಳುವಳಿ ಹೆಚ್ಚುತ್ತಿದೆ ಎಂಬುದು ನಮಗೆ ಖಚಿತವಾಗಿದೆ.

ಇಲ್ಲಿಯವರೆಗೆ ಯಾವ ಗಣರಾಜ್ಯಕ್ಕೂ ಮಹಿಳೆಯನ್ನು ವಿವೇಚನೆಗೊಳಿಸಲಾಗಿಲ್ಲ. ಸೋವಿಯತ್ ಸರ್ಕಾರ ಆ ಕೆಲಸವನ್ನು ಮಾಡುತ್ತಿದೆ. ನಮ್ಮ ಧ್ಯೇಯ ಅಜೇಯ. ಏಕೆಂದರೆ ಅಜೇಯವಾದ ಕಾರ್ಮಿಕವರ್ಗ ಎಲ್ಲಾ ದೇಶಗಳಲ್ಲಿ  ಸಿಡಿದೇಳುತ್ತಿದೆ. ಈ ಚಳುವಳಿ ಅಜೇಯವಾದ ಸಮಾಜವಾದಿ ಕ್ರಾಂತಿಯ ಹರಡುವಿಕೆಯನ್ನು ತೋರಿಸುತ್ತಿದೆ.
(ನವೆಂಬರ್ ೧೯, ೧೯೧೮)

ಕಾಮೆಂಟ್‌ಗಳಿಲ್ಲ: